ಗಬ್ಬು ನಾರುತ್ತಿರುವ ಸರಕಾರಿ ಶಾಲೆಗಳ ಶೌಚಾಲಯದ ಬಗ್ಗೆಗ್ಗಿನ ಯುವತಿ ಟ್ವೀಟ್‌ಗೆ ಶಿಕ್ಷಣ ಸಚಿವರಿಂದ ಸ್ಪಂದನೆ! ಏನು ಸಮಸ್ಯೆ?

0

ಇದೀಗ ಸಕಲೇಶಪುರದ ಸಾಮಾಜಿಕ ಕಾರ್ಯಕರ್ತೆಯೊಬ್ಬರು ಈ ಬಗ್ಗೆಆಂದೋಲನ ಆರಂಭಿಸಿದ್ದು, ಇದು ಸರಕಾರದ ಗಮನ ಸೆಳೆದಿದೆ.

ನಾವು ರಾಜ್ಯದ ಅನೇಕ ಶಾಲೆಗಳಲ್ಲಿ ಶೌಚಾಲಯದ ಸಮಸ್ಯೆ ಇದೆ ಎನ್ನುವ ಬಗ್ಗೆ ಕೇಳಿರುತ್ತೇವೆ. ಆದರೆ ಯಾರು ಕೂಡ ಈ ಬಗ್ಗೆ ಗಮನಹರಿಸಲು ಹೋಗುವುದಿಲ್ಲ. ಸರಕಾರ ಶಾಲೆಗಳಿಗೆ ಶೌಚಾಲಯದ ಸಂಬಂಧ ನೀಡುವ ಅನುದಾನದ ಬಗ್ಗೆ ಪರಿಶೀಲನೆಗೆ ಮುಂದಾಗಿದೆ.

ರಾಜ್ಯದ ಸರಕಾರಿ ಶಾಲೆಗಳಲ್ಲಿ ಸ್ವಚ್ಛತೆಯ ಕೊರತೆ ಇದೆ ಎನ್ನುವ ಆರೋಪಗಳು ಕಳೆದ ಹಲವು ವರ್ಷಗಳಿಂದ ಕೇಳಿಬರುತ್ತಿದೆ. ಅದರಲ್ಲೂ ಪ್ರಮುಖವಾಗಿ ಶೌಚಾಲಯಗಳಲ್ಲಿ ನೈರ್ಮಲ್ಯ ಕಾಪಾಡಲಾಗುತ್ತಿಲ್ಲ ಎನ್ನುವ ದೂರುಗಳು ಆಗಾಗೇ ಕೇಳಿ ಬರುತ್ತಲೇ ಇರುತ್ತದೆ. ಇಂತಹ ಸಮಸ್ಯೆಯಿಂದ ವಿದ್ಯಾರ್ಥಿಗಳು ಭಾರೀ ಸಮಸ್ಯೆ ಎದುರಿಸುತ್ತಿದ್ದಾರೆ.

ಇದೀಗ ಈ ಸಂಬಂಧ ಅರ್ಚನಾ ಕೆ.ಆರ್ ಎಂಬ ಸಾಮಾಜಿಕ ಕಾರ್ಯಕರ್ತೆಯೊಬ್ಬರು ಸರಕಾರದ ಗಮನ ಸೆಳೆಯುವ ಪ್ರಯತ್ನ ಮಾಡಿದ್ದು ಇದರಲ್ಲಿ ಯಶಸ್ವಿಯಾಗಿದ್ದಾರೆ. ಹೌದು, ಸರಕಾರಿ ಶಾಲೆಗಳಲ್ಲಿನ ಶೌಚಾಲಯ ಹಾಗೂ ಅದರ ನೈರ್ಮಲ್ಯದ ಕುರಿತು ಅರ್ಚನಾ ಟ್ವೀಟ್‌ ಮೂಲಕ ಸರಕಾರದ ಗಮನ ಸೆಳೆದಿದ್ದಾರೆ. ಇದರಿಂದ ವಿದ್ಯಾರ್ಥಿಗಳ ಮೇಲಾಗುವ ಸಮಸ್ಯೆಯ ಬಗ್ಗೆ ವಿವರವಾಗಿ ಟ್ವೀಟ್‌ ಮೂಲಕ ತಿಳಿಸಿದ್ದಾರೆ. ಇದಕ್ಕೆ ಶಿಕ್ಷಣ ಸಚಿವ ಸುರೇಶ್‌ ಕುಮಾರ್‌ ಸಕರಾತ್ಮಕವಾಗಿ ಸ್ಪಂದಿಸಿದ್ದಾರೆ.
ಶೌಚಾಲಯಕ್ಕೆ ಸರಕಾರದ ಅನುದಾನ ಎಷ್ಟು?
ಶೌಚಾಲಯ ಹಾಗೂ ಇನ್ನಿತರ ಕಾರ್ಯಗಳಿಗೆ ಸರಕಾರ ವಾರ್ಷಿಕವಾಗಿ(ಪೈಟಿಂಗ್‌, ಕ್ಲೀನಿಂಗ್‌, ರಿಪೇರಿ) ಎರಡು ಸಾವಿರದಿಂದ ಹನ್ನೆರಡು ಸಾವಿರದವರೆಗೆ ಅನುದಾನ ನೀಡುತ್ತದೆ. ಆದರೆ ಇದು ಶಾಲೆಯ ಗಾತ್ರದ ಮೇಲೆ ನಿರ್ಧಾರವಾಗಿರುತ್ತದೆ. ಆದರೆ ಸರಕಾರಿ ಶಾಲೆಯ ಶಿಕ್ಷಕಿಯೊಬ್ಬರ ಪ್ರಕಾರ ಈ ಹಣ ಒಂದು ವರ್ಷಕ್ಕೆ ಎಲ್ಲೆಲ್ಲೂ ಸಾಕಾಗುವುದಿಲ್ಲವಂತೆ.
ಕೇಂದ್ರದ ಕಾರ್ಮಿಕ ನೀತಿ ವಿರೋಧಿಸಿ ಮುಷ್ಕರ, ರಾಜ್ಯಾದ್ಯಂತ ಪ್ರತಿಭಟನೆ
ಹೀಗಾಗಿ ಸರಕಾರದ ಬಳಿ ಈ ಅನುದಾನವನ್ನು 15,೦೦೦ಕ್ಕೆ ಹೆಚ್ಚಿಸಬೇಕೆಂದು ಇದೀಗ ಅರ್ಚನಾ ಮನವಿ ಮಾಡಿದ್ದಾರೆ. ಹಣ ಕಡಿಮೆ ಸಿಗುವುದರಿಂದ ಬೇರೆಲ್ಲ ಖರ್ಚುಗಳಿಗೆ ಹಣ ವಿನಿಯೋಗಿಸಿ ಶೌಚಾಲಯಕ್ಕೆ ಕೊನೆಯ ಆದ್ಯತೆ ನೀಡಲಾಗುತ್ತದೆ ಎನ್ನುವುದು ಅರ್ಚನಾ ಅವರ ವಾದ. ಒಂದು ವೇಳೆ ಉತ್ತಮ ಾನುದಾನ ನೀಡಿದರೆ ಶೌಚಾಲಯ ಸ್ವಚ್ಛತೆಗೆ ಒಂದು ಕೆಲಸಗಾರರನ್ನು ನಿರ್ವಹಿಸಲು ಇಡಬಹುದು ಎನ್ನುತ್ತಾರೆ ಅರ್ಚನಾ. ಸದ್ಯ ಸಾಮಾಜಿಕ ಕಾರ್ಯರ್ತೆಯ ಮನವಿಗೆ ಸ್ಪಂದಿಸಿರುವ ಶಿಕ್ಷಣ ಸಚಿವರು ಆದಷ್ಟೂ ಬೇಗ ಈ ಸಮಸ್ಯೆಯನ್ನು ಬಗೆಹರಿಸುವುದಾಗಿ ಭರವಸೆ ನೀಡಿದ್ದಾರೆ.

ಕ್ಲೀನ್‌ ಇಲ್ಲ ಎಂದು ಶೌಚಾಲಯಕ್ಕೆ ಹೋಗಿಲ್ಲ!
ಅರ್ಚನಾ ಅವರು ಶೌಚಾಲಯದ ಸಂಬಂಧ ಒಂದು ವಿದ್ಯಾರ್ಥಿನಿಗಾದ ಅನುಭವವನ್ನು ಹಂಚಿಕೊಂಡಿದ್ದು ನಿಜಕ್ಕೂ ಕಣ್ಣೀರು ತರುವಂತಿದೆ. ಕಳೆದ ಎಂಟು ವರ್ಷಗಳಿಂದ ನೈರ್ಮಲ್ಯದ ಬಗ್ಗೆ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಲು ಸರಕಾರಿ ಶಾಲೆಗಳಿಗೆ ತೆರಳುವ ಸಾಮಾಜಿಕ ಕಾರ್ಯಕರ್ತೆ ಅರ್ಚನಾ, ಹುಬ್ಬಳ್ಳಿಯ ಒಂದು ಸರಕಾರಿ ಶಾಲೆಗೆ ತೆರಳಿದ್ದರಂತೆ.
ಈ ವೇಳೆ ಅಲ್ಲಿನ ಶೌಚಾಲಯದ ಬಗ್ಗೆ 14 ವರ್ಷ ಯುವತಿ ಹೇಳಿದ ಸ್ಟೋರಿ ಕೇಳಿ ದಂಗಾಗಿದ್ದಾರೆ. ಹೌದು, ಟಾಯ್ಲೆಟ್‌ ಸರಿ ಇಲ್ಲದ ಹಾಗೂ ನೈರ್ಮಲ್ಯ ಇಲ್ಲದ ಕಾರಣ ವಿದ್ಯಾರ್ಥಿನಿ ಶೌಚಾಲಯಕ್ಕೆ ಹೋಗುವುದಿಲ್ಲವಂತೆ. ಇನ್ನು ಶೌಚಾಲಯಕ್ಕೆ ಹೋಗದೇ ಇರಲು ಮುಂಜಾನೆಯಿಂದ ಸಂಜೆವರೆಗೆ ಅಂದರೆ ಸುಮಾರು ಎಂಟು ಗಂಟೆಗಳ ಕಾಲ ನೀರು ಹಾಗೂ ಆಹಾರ ತಿನ್ನದೆ ಇರುತ್ತಾಳಂತೆ. ಇದು ವಿದ್ಯಾರ್ಥಿಗಳ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುವ ಸಾಧ್ಯತೆ ಇದೆ ಎನ್ನುತ್ತಿರುವ ಅರ್ಚನಾ ಇಂತಹ ಪರಿಸ್ಥಿತಿ ಹಲವು ಸರಕಾರಿ ಶಾಲೆಗಳಲ್ಲಿ ಇದೆ ಎನ್ನುತ್ತಿದ್ದಾರೆ.
ಸದ್ಯ ಹಾಸನ ಜಿಲ್ಲೆಯ ಸಕಲೇಶಪುರದ ಅರ್ಚನಾ ಅವರ ಆಂದೋಲನಕ್ಕೆ ಸರಕಾರದಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಸರಕಾರ ಆದಷ್ಟು ಬೇಗ ಈ ಬಗ್ಗೆ ಗಮನಹರಿಸಿ ವಿದ್ಯಾರ್ಥಿಗಳ ಆರೋಗ್ಯಕ್ಕೆ ಒತ್ತು ಕೊಡಬೇಕಿದೆ.

LEAVE A REPLY

Please enter your comment!
Please enter your name here