ಅಂಗನವಾಡಿ ಕಾರ್ಯಕರ್ತೆಯರಿಗೆ ಸ್ಮಾರ್ಟ್ ಮೊಬೈಲ್ ಫೋನ್

0

ಹಾಸನ : (ಹಾಸನ್_ನ್ಯೂಸ್) !, ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ” “ಪೋಷಣ್ ಅಭಿಯಾನ ಯೋಜನೆ”ಯಡಿ ಅಂಗನವಾಡಿ ಕಾರ್ಯಕರ್ತೆಯರಿಗೆ ಸ್ಮಾರ್ಟ್ ಮೊಬೈಲ್ ಫೋನ್ ವಿತರಣಾ ಕಾರ್ಯಕ್ರಮವು ಹಾಸನ ನಗರದ ಅಂಬೇಡ್ಕರ್ ಭವನದಲ್ಲಿ ಜರುಗಿತು

ಈ ಸಂದರ್ಭದಲ್ಲಿ ಕೊರೋನಾ ಮಹಾಮಾರಿಯ ಭಯದ ನಡುವೆಯೂ ಗ್ರಾಮಗಳಲ್ಲಿ ತಾಯಂದಿರು ಮತ್ತು ಮಕ್ಕಳ ಆರೋಗ್ಯದ ಕಾಳಜಿಯನ್ನು ಇಟ್ಟುಕೊಂಡು ಕಾರ್ಯನಿರ್ವಹಿಸುತ್ತಿರುವ ಅಂಗನವಾಡಿ ಕಾರ್ಯಕರ್ತೆಯರು ಸರ್ಕಾರ ಮತ್ತು ಇಲಾಖೆಗೆ ಮಾಹಿತಿ ರವಾನಿಸಲು ಸುಲಭವಾಗುವ ಉದ್ದೇಶದಿಂದ ಮೊಬೈಲ್ ಸ್ಮಾರ್ಟ್ ಫೋನನ್ನು 100 ಜನ ಅಂಗನವಾಡಿ ಕಾರ್ಯಕರ್ತೆಯರಿಗೆ ವಿತರಿಸಲಾಯಿತು.


ಸಂದರ್ಭದಲ್ಲಿ ಹಾಸನ ವಿಧಾನ ಸಭಾ ಕ್ಷೇತ್ರ ಶಾಸಕರು ಪ್ರೀತಮ್ ಜೆ ಗೌಡ , ಹಾಸನ ಜಿಲ್ಲಾಧಿಕಾರಿಗಳಾದ ಆರ್. ಗಿರೀಶ್, ಜಿ.ಪಂ ಸಿಇಓ ಪರಮೇಶ್ , ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧಿಕಾರಿಗಳಾದ ದಿಲೀಪ್  ಉಪಸ್ಥಿತರಿದ್ದರು.

@preethamjgowdaofficial

LEAVE A REPLY

Please enter your comment!
Please enter your name here