ವಿದ್ಯುತ್ ಇಲಾಖೆ ಖಾಸಗೀಕರಣ ಖಂಡಿಸಿ ರಾಮನಾಥಪುರ ಚಾಮುಂಡೇಶ್ವರಿ ಉಪವಿಭಾಗದ ಕಚೇರಿ ಮುಂಭಾಗ ಎಲ್ಲಾ ಕೆಇಬಿ ನೌಕರರು ಹೊಸ ಕೆಇಬಿ ಕಾಯ್ದೆ ವಿರೋಧಿಸಿ ಕಪ್ಪು ಪಟ್ಟಿ ಧರಿಸಿ ಸರ್ಕಾರದ ವಿರುದ್ದ ಘೋಷಣೆ ಕೂಗಿ ಪ್ರತಿಭಟನೆ ನಡೆಸಿದರು.
ಕೇಂದ್ರ ಸರ್ಕಾರದ ಈ ಖಾಸಗೀಕರಣ ನೀತಿಯನ್ನು ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ಮಂಡಳಿ ನೌಕರರು ಮತ್ತು ಅಧಿಕಾರಿಗಳ ಒಕ್ಕೂಟವು ತೀವ್ರವಾಗಿ ವಿರೋಧಿಸುತ್ತಿದೆ.