ಸೈಕಲ್ ಗುರುವಿಗೆ ಸಾಥ್ ನೀಡಿದ ಹಾಸನದ ಯುವಜನತೆ

0

ಆತ್ಮೀಯ ಸನಾತನ ಸಂಸ್ಕೃತಿಯ ಪಾಲಕರೆ ಇವರು ಶ್ರೀ ನಾಮಧಾರಿ ದಾಸ್ ರಾಮದಾಸ್ ಅವರು ಮೂಲತಹ ಮಹಾರಾಷ್ಟ್ರದವರು ಪ್ರಸ್ತುತ ನರ್ಮದಾ ನದಿಯ ತಟದ ಮಧ್ಯಪ್ರದೇಶ ಭಾಗದಲ್ಲಿ ಆಶ್ರಮದಲ್ಲಿ ವಾಸಿಸುತ್ತಿದ್ದವರು ಲೋಕಕಲ್ಯಾಣಕ್ಕಾಗಿ ಭಾರತ ಯಾತ್ರೆಯನ್ನು ಮಾಡಲು ಯೋಚಿಸಿ ಗಂಗೋತ್ರಿಯಿಂದ ಪ್ರಾರಂಭವಾದ ಇವರ ಪಾದಯಾತ್ರೆಯನ್ನು ಗಂಗೋತ್ರಿ ,ಯಮುನೋತ್ರಿ, ಕೇದಾರನಾಥ್ ,ಬದ್ರಿನಾಥ್ , ಸೇರಿದಂತೆ ದ್ವಾದಶ ಜ್ಯೋತಿರ್ಲಿಂಗಗಳ ದರ್ಶನವನ್ನು ಮಾಡಿ ರಾಮೇಶ್ವರಂನಲ್ಲಿ ಇವರ ಪಾದಯಾತ್ರೆ ಅಂತ್ಯಗೊಂಡಿತ್ತು,
ಆದರೆ ಭಾರತಯಾತ್ರೆ ಸೈಕಲ್ ಮೂಲಕ ಮುಂದುವರೆದು ತಮಿಳ್ ನಾಡು ಕೇರಳಮಾರ್ಗವಾಗಿ ಕರ್ನಾಟಕವನ್ನು ಪ್ರವೇಶಿಸಿದ್ದು ಲಾಕ್ಡೌನ್ ಸಮಯದಲ್ಲಿ ಕರ್ನಾಟಕದ ಪಾಂಡವಪುರದ ಕ್ಯಾತನಹಳ್ಳಿ ಗ್ರಾಮದ ಆಶ್ರಮದಲ್ಲಿ ಆರು ತಿಂಗಳ ಕಾಲ ಲೋಕಕಲ್ಯಾಣಕ್ಕಾಗಿ ನಿತ್ಯ ಅನುಷ್ಠಾನಾದಿಗಳನ್ನು ಮಾಡಿದ ನಂತರದಲ್ಲಿ ಮತ್ತೆ ಯಾತ್ರೆಯನ್ನು ಮುಂದುವರಿಸಿ

ಹಾಸನ ಮಾರ್ಗವಾಗಿ ಬೇಲೂರು ,ಹಳೇಬೀಡು ,ಮೂಡಿಗೆರೆ ,ಕೊಟ್ಟಿಗೆಹಾರ ಹೊರನಾಡು ,ಶೃಂಗೇರಿ , ಕೊಲ್ಲೂರು ಮೂಕಾಂಬಿಕಾ ಗೋಕರ್ಣ ,ಮುರುಡೇಶ್ವರ ,ಮಾರ್ಗವಾಗಿ ಮಹಾರಾಷ್ಟ್ರವನ್ನು ತಲುಪುವ ಸಂಕಲ್ಪವನ್ನು ಹೊಂದಿದ್ದಾರೆ ಈ ಮಾರ್ಗದಲ್ಲಿ ಇವರಿಗೆ ವಿಶೇಷ ಕ್ಷೇತ್ರಗಳ ದರ್ಶನ ಹಾಗೂ ವಾಸ ವ್ಯವಸ್ಥೆಯನ್ನು ಮಾಡಲಿಚ್ಚಿಸುವವರು ಇವರನ್ನು ಸಂಪರ್ಕಿಸಬಹುದು ಸರಳ ವ್ಯವಸ್ಥೆ ಸ್ನಾನ ಸಂಧ್ಯಾವಂದನೆ ಮಾಡಲು ಮತ್ತು ವಾಸಿಸಲು ಅವಕಾಶವನ್ನು ಕಲ್ಪಿಸಿಕೊಟ್ಟರೆ ಸಾಕು ಅವರು ಸ್ವಯಂ ಪಾಕವನ್ನು ಮಾಡಿಕೊಳ್ಳುತ್ತಾರೆ ಅವರಿಗೆ ಬೇಕಾದ ವಸ್ತುಗಳನ್ನು ಕೊಡಬಹುದು ಇವರು ಸಾಲಿಗ್ರಾಮ ನಿತ್ಯ ಆರಾಧಕರು ಯಾರನ್ನು ಏನು ಕೇಳದ ವ್ಯಕ್ತಿತ್ವ ನಿತ್ಯ ಐವತ್ತು ಕಿಲೋಮೀಟರ್ ಸೈಕಲನ್ನು ತುಳಿಯುವ ಸಾಮರ್ಥ್ಯವನ್ನು ಇವರು ಹೊಂದಿದ್ದಾರೆ ಇವರಿಗೆ ವಾಸ ವ್ಯವಸ್ಥೆ ಮಾಡಲು ಸಾಧ್ಯವಾಗದವರು ಮಾರ್ಗದ ಮತ್ತು ಉಳಿಯುವ ವ್ಯವಸ್ಥೆಗಳ ಬಗ್ಗೆ ಮಾರ್ಗದರ್ಶನವನ್ನು ಮಾಡಬಹುದಾಗಿದೆ.

ಇವರ ಯಾತ್ರೆ ಸತತ ನಾಲ್ಕು ವರ್ಷಗಳನ್ನು ಪೂರೈಸಿದೆ
ಇವರು ಮಾಡುತ್ತಿರುವ ಲೋಕಕಲ್ಯಾಣಕ್ಕಾಗಿ ಧರ್ಮದ ಕಾರ್ಯದಲ್ಲಿ ಇವರಿಗೆ ಸಹಾಯವನ್ನು ಮಾಡಿ ನಾವು ಧರ್ಮಕಾರ್ಯಕ್ಕೆ ಕಿಂಚಿತ್ ಸೇವೆ ಸಲ್ಲಿಸೋಣ ಇವರ ಬಗ್ಗೆ ಮಾರ್ಗ ಮಧ್ಯೆ ಬರುವ ಸ್ನೇಹಿತರು ಕುಟುಂಬ ಮಿತ್ರರಿಗೆ ಸ್ವಾಗತ ಮಾಡಲು ತಿಳಿಸೋಣ ನಾವಂತೂ ಭಾರತ ಯಾತ್ರೆಯನ್ನು ಮಾಡಲು ಕಷ್ಟಸಾಧ್ಯ ಇವರು ಮಾಡುತ್ತಿರುವ ಈ ಕಾರ್ಯವನ್ನು ನೋಡಿ ಕಣ್ತುಂಬಿಕೊಳ್ಳೋಣ.. ಇಂದು pedal demons ಹಾಸನ ಸೈಕಲ್ ಸವಾರರ ತಂಡ ಇವರಿಗೆ ಸ್ವಲ್ಪ ದೂರಗಳು ಜೊತೆಯಲ್ಲಿ ಸಾಗಿ ಬೀಳ್ಕೊಡುಗೆಯನ್ನು ಕೊಟ್ಟಿದೆ
ನಾಮಧಾರಿ ದಾಸ್ ಜೀ :+91 95227 16161
ಶೇರ್ ಮಾಡಿ

LEAVE A REPLY

Please enter your comment!
Please enter your name here