0

    ಹಾಸನ ಜಿಲ್ಲೆಯ ಬೇಲೂರು ತಾಲ್ಲೂಕಿನ ಬಸ್ ನಿಲ್ದಾಣದ ಸಮೀಪದ ಪ್ರವಾಸಿ ಮಂದಿರದ ಮುಂಭಾಗದ ರಸ್ತೆಯಲ್ಲಿ ನಿಂತಿದ್ದ ಹಾಲಿನ ಲಾರಿಗೆ ಡಾ.ಅಂಬೇಡ್ಕರ್ ನಗರದ ಕಡೆಯಿಂದ ವೇಗವಾಗಿ ಹಿಂಬದಿಯಿಂದ ಬಂದ ಗೂಡ್ಸ್ ಆಟೊ

    ಒಂದು ನಿನ್ನೆ (20sep) ಭಾನುವಾರ ಡಿಕ್ಕಿ ಹೊಡೆದ ಪರಿಣಾಮ ಚಾಲಕ ಹಾಗೂ ಪ್ರಯಾಣಿಕ ಗಾಯಗೊಂಡು , ಆಟೋ ಜಖಂಗೊಂಡಿದೆ , ಚಾಲಕ ಕಿರಣ್ ಹಾಗೂ ಪ್ರಯಾಣಿಕ ಯೋಗಾಚಾರಿ ಹೊರಬರಲಾರದೆ ಸಿಲುಕಿ ನರಳಾಡುತ್ತಿದ್ದ ಸಂದರ್ಭ ದಲ್ಲಿ ಕಬ್ಬಿಣದ ಹಾರೆ ಬಳಸಿ ಇಬ್ಬರನ್ನು ಹೊರಗೆ ತಂದು, ಬೇಲೂರು ಸರ್ಕಾರಿ ಆಸ್ಪತ್ರೆಯಲ್ಲಿ
    ಪ್ರಾಥಮಿಕ ಚಿಕಿತ್ಸೆ ಕೊಡಿಸಿ, ಜಿಲ್ಲಾಸ್ಪತ್ರೆಗೆ ಕೊಡಿಸಲಾಗಿದೆ , 2 ವಾಹನಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡು ತನಿಖೆ ನಡೆಸಿದ್ದಾರೆ .

    LEAVE A REPLY

    Please enter your comment!
    Please enter your name here