Arkalgud

ಕೊಣನೂರಿನಿಂದ ಮೈಸೂರಿಗೆ ಬೈಕಿನಲ್ಲಿ ತೆರಳುತ್ತಿದ್ದಾಗ ಪಲ್ಸರ್ ಕ್ಯಾಂಟರ್ ರಸ್ತೆ ಅಪಘಾತ ಬೈಕ್ ಸವಾರ ಸಾವು

By Hassan News

January 24, 2023

ಅದಾಗಲೇ ಎಂಜಿನಿಯರ್ ಆಗಿ ಮೈಸೂರಿನ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಈತ ಕೊಣನೂರಿನಿಂದ ಮೈಸೂರಿಗೆ ಬೈಕಿನಲ್ಲಿ ತೆರಳುತ್ತಿದ್ದಾಗ ಮಲ್ಲಿರಾಜಪಟ್ಟಣ ಸಮೀಪ ಎದುರಿನಿಂದ ಬರುತ್ತಿದ್ದ ಕ್ಯಾಂಟರ್ ಚಾಲಕ ಅತಿ ವೇಗ ಮತ್ತು ಅಜಾಗರೂಕತೆಯಿಂದ ಬಂದು ಬೈಕಿಗೆ ಡಿಕ್ಕಿ ಹೊಡೆದ ಪರಿಣಾಮ? ,  ಸವಾರನಿಗೆ ತೀವ್ರಗಾಯ ಹಾಗೂ ರಕ್ತಸ್ರಾವ ಉಂಟಾಗಿ ತಕ್ಷಣ ಕೊಣನೂರಿನ ಆಸ್ಪತ್ರೆಗೆ ದಾಖಲಿಸಲಾಯಿತಾದರೂ.

ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟ ಘಟನೆ ನಡೆದಿದೆ , ಹಾಸನ ಜಿಲ್ಲೆಯ ಅರಕಲಗೂಡು ತಾಲ್ಲೂಕಿನ ರಾಮನಾಥಪುರ ಹೋಬಳಿ ಮಲ್ಲಿರಾಜಪಟ್ಟಣ ಗ್ರಾಮದ ಸಮೀಪದ ತಿರುವಿನಲ್ಲಿ ಸಂಭವಿಸಿದ ಅಪಘಾತದಲ್ಲಿ ಬೈಕ್ ಸವಾರ ಕೊಣನೂರು ಗ್ರಾಮದ ಕೆ.ಬಿ.ಶ್ರೀನಿಧಿ(25) ಸಾವನ್ನಪ್ಪಿರುವ ಘಟನೆ ಭಾನುವಾರ 22ಜ.2023 ಸಂಜೆ ಸಂಭವಿಸಿದೆ. , ಇಂಜಿನಿಯರಿಂಗ್ ಮಾಡೋದೆ ಕಷ್ಟ , ಅಂತಹದರಲ್ಲಿ

ಕೆಲಸವು ಗಿಟ್ಟಿಸಿಕೊಂಡು ಸುಖವಾಗಿ ಜೀವಿಸಿ ಮನೆಯವರಿಗೆ ಆಧಾರವಾಗ ಬೇಕಿದ್ದ ಸ್ಥಂಭ ಇನ್ನಿಲ್ಲ ,  ಕೊಣನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ