Arsikere

ರಸ್ತೆ ಅಪಘಾತ ಸಾವು ; ಮೃಯ ಬಸವರಾಜು ಅವರಿಂದ ಒಂಬತ್ತು ಜನರ ಬದುಕಿಕ್ಕೆ ಆಸರೆ ಸಾರ್ಥಕತೆ

By Hassan News

February 18, 2023

ದಿನಾಂಕ.15/02/2023 ಬುಧವಾರ ಹೊಸದುರ್ಗ ತಾಲ್ಲೂಕಿನ ಬೆಲಗೂರು ಸಮೀಪದ ಬಳಿ ಆಲಘಟ್ಟ ಗೊಲ್ಲರಹಟ್ಟಿಯ ಬಸವರಾಜು ಅವರಿಗೆ ಅಪಘಾತ ಆಗಿದ್ದು, ತಲೆಯ ಹಿಂಭಾಗಕ್ಕೆ ಅತೀ ಹೆಚ್ಚು ಬಲವಾದ ಪೆಟ್ಟು ಬಿದ್ದು ಅವರ ಮೆದುಳು ನಿಷ್ಕರಿಯಾಗೊಂಡಿದ್ದು. ಬದುಕುವ ನಿರೀಕ್ಷೆ ಕಡಿಮೆ ಇದ್ದ ಕಾರಣ

ಮೃತಪಟ್ಟರು ., ಅವರ ಪತ್ನಿ ಸುಶೀಲ G S ( ಮೇಳೇನಹಳ್ಳಿ ಗೊಲ್ಲರಹಟ್ಟಿ ಅರಸೀಕೆರೆ ತಾಲ್ಲೂಕು ) ಅವರು ಇಂದು ಅಂದರೆ 17/02/2023 ಶುಕ್ರವಾರ ಬೆಂಗಳೂರಿನ ವಿಕ್ಟೊರಿಯಾ ಆಸ್ಪತ್ರೆ ಯಲ್ಲಿ ಅವರ ಪತಿ ಬಸವರಾಜು ಅವರ ಅಂಗಾಂಗಗಳನ್ನು ದಾನಮಾಡಿ ., ಸಾರ್ಥಕತೆ ಮೆರೆದಿದ್ದಾರೆ ., ಇವರಿಂದ ಒಂಬತ್ತು ಜನರ ಬದುಕಿಕ್ಕೆ ಆಸರೆಯಾಗಿದೇ. ದೇವರು

ಈ ಸಹೋದರಿ ಕುಟುಂಬಕ್ಕೆ ಧೈರ್ಯ ಆಶೀರ್ವಾದ ಕಲ್ಪಿಸಲಿ ಎಂದು ಈ ಮೂಲಕ ಹಾರೈಸೋಣ .,ಬಸವರಾಜು ಅವರ ಆತ್ಮಕ್ಕೆ ಶಾಂತಿ ಸಿಗಲಿ.