Breaking News

ರಸ್ತೆ ಅಪಘಾತ: ಗ್ರಾಮ ಪಂಚಾಯಿತಿ ಅಧ್ಯಕ್ಷರ ಮಗ ಸಿವಿಲ್ ಎಂಜಿನಿಯರ್ ಚಂದನ್ (27ವರ್ಷ) ಸಾವು

By Hassan News

April 17, 2023

ಹಾಸನ ಜಿಲ್ಲೆಯ ಚನ್ನರಾಯಪಟ್ಟಣದಿಂದ ಕಾರೇಹಳ್ಳಿ ಗ್ರಾಮಕ್ಕೆ ಬರುವಾಗ ಭಾನುವಾರ ಮುಂಜಾನೆ 3ರ ಸಮಯದಲ್ಲಿ ಕಾರು ರಸ್ತೆ ಬದಿ ವಿದ್ಯುತ್ ಕಂಬಕ್ಕೆ ಗುದ್ದಿದೆ. ಚಾಲಕ ನಾಗೇಶ್ ಪ್ರಾಣಪಾಯದಿಂದ ಪಾರಾಗಿದ್ದು, ಚಂದನ್ ಆಸ್ಪತ್ರೆಗೆ ಸಾಗಿಸುವ ಮಾರ್ಗದಲ್ಲಿ

ಕೊನೆ ಉಸಿರೆಳೆದಿದ್ದಾರೆ , ಜಂಬೂರು ಕಾಲೋನಿ ಸಮೀಪ ಭಾನುವಾರ ಮುಂಜಾನೆ ಸಂಭವಿಸಿದ ಈ ರಸ್ತೆ ಅಪಘಾತದಲ್ಲಿ ಬಾಗೂರು ಹೋಬಳಿ ಕಾರೇಹಳ್ಳಿಯ ಸಿವಿಲ್ ಎಂಜಿನಿಯರ್ ಚಂದನ್ (27) ಮೃತಪಟ್ಟರು., ಈ ಸಂಬಂಧ ಠಾಣೆಯಲ್ಲಿ ದೂರು ದಾಖಲಾಗಿದೆ. ಮೃತರ ಅಂತ್ಯಕ್ರಿಯೆ ಭಾನುವಾರ ಮಧ್ಯಾಹ್ನ ಕಾರೇಹಳ್ಳಿಯಲ್ಲಿ ನಡೆಯಿತು. ಶಾಸಕ ಸಿಎನ್ ಬಾಲಕೃಷ್ಣ ದಂಪತಿ ಸೇರಿ ವಿವಿಧ ಪಕ್ಷಗಳ ರಾಜಕೀಯ ನಾಯಕರು ಅಂತಿಮ ದರ್ಶನ ಪಡೆದು ಕುಟುಂಬದವರಿಗೆ ಸಾಂತ್ವನ ಹೇಳಿದರು , ಕಾರೇಹಳ್ಳಿ ಗ್ರಾಮದ ಪಿಎಲ್‌ ಡಿ ಬ್ಯಾಂಕ್ ನಿರ್ದೇಶಕ ಕೆ.ಟಿ. ನಟೇಶ್ ಅವರ ಪುತ್ರನಾಗಿರುವ ಚಂದನ್,

ಚನ್ನರಾಯಪಟ್ಟಣದಿಂದ ಕಾರೇಹಳ್ಳಿ ಗ್ರಾಮಕ್ಕೆ ಬರುವ ಸಂದರ್ಭದಲ್ಲಿ ಮುಂಜಾನೆ 3 ಗಂಟೆ ಸಮಯದಲ್ಲಿ ಜಂಬೂರು ಕಾಲೋನಿ ತಿರುವಿನಲ್ಲಿ ಐ 20 ಕಾರು ರಸ್ತೆ ಬದಿಯ ವಿದ್ಯುತ್‌ ಕಂಬಕ್ಕೆ ಗುದ್ದಿದೆ. ಚಾಲಕ ನಾಗೇಶ್ ಪ್ರಾಣಪಾಯದಿಂದ ಪಾರಾಗಿದ್ದಾರೆ. ಆದರೆ ಗಂಭೀರ ಗಾಯಗೊಂಡಿದ್ದ ಚಂದನ್‌ ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ಕೊನೆ ಉಸಿರೆಳೆದಿದ್ದಾರೆ.