Channarayapattana

ರಾಷ್ಟ್ರ ಮಟ್ಟದ ಇನ್‌ಸ್ಪೈರ್‌ ಮಾನಕ್‌ ಅವಾರ್ಡ್‌ ಗೆ ಆಯ್ಕೆ

By

September 16, 2022

ಹಾಸನ : ದೆಹಲಿಯಲ್ಲಿ ನಡೆಯುವ 2020–21 ನೇ ಸಾಲಿನ ರಾಷ್ಟ್ರ ಮಟ್ಟದ ಇನ್‌ಸ್ಪೈರ್‌ ಮಾನಕ್‌ ಅವಾರ್ಡ್‌ ಗೆ ಶ್ರವಣಬೆಳಗೊಳ ಹೋಬಳಿಯ ದಡಿಘಟ್ಟ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ 7ನೇ ತರಗತಿಯ ವಿದ್ಯಾರ್ಥಿನಿ ಡಿ.ವಿ.ಯಶೋಧಾ ಆಯ್ಕೆಯಾಗಿದ್ದಾಳೆ.

ಮಂಗಳೂರಿನ ಸುರತ್ಕಲ್‌ನಲ್ಲಿ ಇತ್ತೀಚೆಗೆ  ನಡೆದ ರಾಜ್ಯ ಮಟ್ಟದ ವಿಜ್ಞಾನ  ಮಾದರಿಗಳ ಪ್ರದರ್ಶನ ಮತ್ತು ಸ್ಪರ್ಧೆಯಲ್ಲಿ ಆಯ್ಕೆ ನಡೆದಿತ್ತು. ಮುಖ್ಯಶಿಕ್ಷಕ ಪಿ.ಹನುಮಂತಪ್ಪ ಮಾರ್ಗದರ್ಶನ ಮಾಡಿದ್ದಾರೆ.