ಯೋಧರಿಬ್ಬರ ಕುಟುಂಬಗಳ ನಡುವೆ ಜಮೀನು ವಿಚಾರ ಜಗಳ ಮೊಬೈಲ್ ಕ್ಯಾಮರಾದಲ್ಲಿ ಸೆರೆ : ಒರ್ವ ಸಾವು

0

ಹಾಸನ : ಜಿಲ್ಲೆಯ ಬೇಲೂರು ತಾಲ್ಲೂಕಿನ ಈ ಗ್ರಾಮದಲ್ಲಿ ಈ ಹಿಂದೆಯೂ ಈ ಜಮೀನಿನ ವಿಚಾರವಾಗಿ ಸಾಕಷ್ಟು ಬಾರಿ ಗಲಾಟೆಗಳು ನಡೆದಿತ್ತು , ಆದರೆ ಈ ಮಟ್ಟಿಗಲ್ಲ , ಅದು ಒಂದು ಪ್ರಾಣ ಹಾರಿಹೋಗುವಷ್ಟರ ಮಟ್ಟಿಗಲ್ಲ ., ಜಮೀನಿನ ಸ್ವಲ್ಪ ಜಾಗ ನಮಗೆ ಸೇರಿದ್ದು ಎಂದು ಈ ಹಿಂದೆ

ಚಂದನ್/ಯಶವಂತ್ ಕುಟುಂಬ ಗಲಾಟೆ ಮಾಡಿಕೊಂಡಿತ್ತು. ನಿನ್ನೆ ಭಾನುವಾರವೂ ( 20 Nov 2022 ) ಇದೇ ವಿಚಾರಕ್ಕೆ ತಗಾದೆ ಶುರುವಾಗಿ, ಅಲ್ಲೇ ಒಂದು ಅಜ್ಜಿ ಬಳಿಯಿದ್ದ ಕುಡುಗೋಲು ಕಿತ್ತುಕೊಂಡು ಯೋಧ ಚಂದನ್‌, ಯಶವಂತ್ ಹಾಗೂ

ಆತನ ಸಹೋದರ ಯತೀಶ್ ಮೇಲೆ ಹಲ್ಲೆ ನಡೆಸಿದ್ದಾರೆ. ಹಲ್ಲೆಯಿಂದ ಗಾಯಗೊಂಡಿದ್ದ ಯಶವಂತ್‌ರನ್ನು ಆಸ್ಪತ್ರೆಗೆ ಸೇರಿಸಲಾಯಿತಾದರೂ ತೀವ್ರ ರಕ್ತಸ್ರಾವಗೊಂಡ ಯಶವಂತ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾರೆ. ಯಶವಂತ್‌ ಸಹೋದರ, ಯೋಧ ಯತೀಶ್ ಕೂಡ ತೀವ್ರ ಗಾಯಗೊಂಡಿದ್ದು, ಅವರಿಗೆ ಖಾಸಗಿ‌ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ., ಘಟನೆ ಹಾಸನ ಜಿಲ್ಲೆಯ ಬೇಲೂರು ತಾಲೂಕಿನ

ತಿರುಮನಹಳ್ಳಿಯಲ್ಲಿ ನಡೆದಿದ್ದು ಯೋಧರಿಬ್ಬರ ಕುಟುಂಬಗಳ ನಡುವೆ ಜಮೀನು ವಿಚಾರಕ್ಕೆ ಗಲಾಟೆ ಕೊಲೆಯಲ್ಲಿ ಅಂತ್ಯಗೊಂಡಿದೆ ., ಯೋಧರ ಕುಟುಂಬದ ಜಗಳವು ಮೊಬೈಲ್ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಕುಡುಗೋಲಿನಿಂದ ಹಲ್ಲೆ ನಡೆಸಿರುವುದು ಕಂಡು ಬಂದಿದೆ. ಚಂದನ್ ಮತ್ತು ಆತನ ಸಹೋದರ ಅಶ್ವಥ್ ಸೇರಿ

ಐವರ ವಿರುದ್ಧ ಹಳೇಬೀಡು ಠಾಣೆಯಲ್ಲಿ ದೂರು ದಾಖಲಾಗಿದ್ದು, ಪೊಲೀಸರು ಪ್ರಕರಣ ಸಂಬಂಧ ತನಿಖೆ ನಡೆಸುತ್ತಿದ್ದಾರೆ.

LEAVE A REPLY

Please enter your comment!
Please enter your name here