ಚನ್ನರಾಯಪಟ್ಟಣ: ನಾಲ್ಕು ದಿನಗಳ ಹಿಂದೆ ದಿಢೀರ್ ಕಾಣೆಯಾಗಿದ್ದ ಯುವಕ ಶವವಾಗಿ ಪತ್ತೆಯಾಗಿದ್ದಾನೆ. ತಾಲೂಕಿನ ಗೂರನಹಳ್ಳಿ-ಅರಳಿಕಟ್ಟೆ ಬಾಗೂರು ರಸ್ತೆಯ ಚಂದ್ರಮ ಎಂಬುವರ ಮಗ ಪ್ರತಾಪ್ಗೌಡ(29) ಕೊಲೆಯಾದ ಯುವಕ.
ಕಳೆದ ಏ.1 ರ ಸಂಜೆ ತಂಗಿಯ ಮಗನನ್ನು ತಾಲೂಕಿನ ದೊಡ್ಡಯರಗನಾಳು ಗ್ರಾಮಕ್ಕೆ ಬಿಟ್ಟು ಬರಲು ಹೋಗಿದ್ದ ಪ್ರತಾಪ್, ವಾಪಸ್ ಮನೆಗೆ ಬಾರದೆ ದಿಢೀರ್ ಕಾಣೆಯಾಗಿದ್ದ ಯುವಕನ ಕೊಲೆ
ಆತನ ಬೊಬೈಲ್ ಸಹ ಸ್ವಿಚ್ ಆಫ್ ಆಗಿತ್ತು. ಎಲ್ಲಾ ಕಡೆ ಹುಡುಕಾಡಿದ ಮನೆಯವರು ಏ.4 ರಂದು ಗ್ರಾಮಾಂತರ ಠಾಣೆಗೆ ಮಿಸಿಂಗ್ ಕೇಸ್ ನೀಡಿದರು.
ಜೊತೆಗೆ ಹುಟುಕಾಟ ಮುಂದುವರಿಸಿದ ತಾಯಿ ಚಂದ್ರಮ್ಮ ಹಾಗೂ ಸಂಬಂಧಿಗಳಿಗೆ ಮಂಗಳವಾರ ಗೂರನಹಳ್ಳಿಯ ಕುರಿಕಾವಲು ಫಾರೆಸ್ಟ್ನ ಮಧ್ಯ ಭಾಗದಲ್ಲಿ ಕೊಳೆತ ವಾಸನೆ ಮೂಗಿಗೆ ಬಡಿದಿದೆ. ಹತ್ತಿರ ಹೋಗಿ ನೋಡಿದಾಗ ಅದು ಪ್ರತಾಪ್ಗೌಡನ ಮೃತದೇಹ ಎಂದು ಖಾತ್ರಿಯಾಗಿದೆ. ಬಹುಶಃ ಪ್ರತಾಪ್ ಕಾಣೆಯಾದ ದಿನವೇ ದುಷ್ಕರ್ಮಿಗಳು ಯಾವುದೋ ದುರುದ್ದೇಶದಿಂದ ಆತನನ್ನು
ಹತ್ಯೆ ಮಾಡಿ ನಂತರ ಕಾಡಿನ ಮರಕ್ಕೆ ನೇಣು ಮೃತದೇಹ ಹಾಕಿದ್ದಾರೆ ಬಹುತೇಕ ಎನ್ನಲಾಗಿದ್ದು, ದೇಹ ಅಲ್ಲೇ ಕೊಳೆತು ಹೋಗಿದೆ. ಮೃತನ ಚಿಕ್ಕಪ್ಪನ ಸೈಟಿನ ವಿಚಾರ ಅಥವಾ ಬೇರೆ ಯಾವುದೋ ಜಿದ್ದಿಗೆ ಕೊಲೆ ಮಾಡಿ ಇದನ್ನು ಮರೆ ಮಾಚಲು ನೇಣು ಹಾಕಿರಬಹುದೆಂದು ಶಂಕಿಸಲಾಗಿದೆ. ಮೃತರ ತಾಯಿ ನೀಡಿದ ದೂರು ಆಧರಿಸಿ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.
ಹೊಳೆನರಸೀಪುರ ಡಿವೈಎಸ್ಪಿ ಮುರಳೀಧರ್, ಇನ್ಸ್ಪೆಕ್ಟರ್ ರೇಖಾಬಾಯಿ ಎಂ.ಹೆಚ್., ಪಿಎಸ್ಐ ಶಿವಣ್ಣ ಮೊದಲಾದವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.
SBI tanike aagale beku