Belur

ಹಾಡಹಗಲೇ ತನ್ನ ಪತ್ನಿಯನ್ನೇ ಕೊಲೆ ಮಾಡಿ ತಲೆ ಮರೆಸಿಕೊಂಡಿದ್ದ ಆರೋಪಿ

By

July 30, 2022

ಬೇಲೂರು : ಹಾಡಹಗಲೇ ತನ್ನ ಪತ್ನಿಯನ್ನೇ ಕೊಲೆ ಮಾಡಿ ತಲೆ ಮರೆಸಿಕೊಂಡಿದ್ದ ಆರೋಪಿ ಪತಿಯನ್ನು ಬಂಧಿಸುವಲ್ಲಿ ಬೇಲೂರು ಠಾಣೆಯ ಪೊಲೀಸರು ಯಶಸ್ವಿಯಾಗಿದ್ದಾರೆ.

ನ೦ತರ ಜಗದೀಶ್ ನಾಪತ್ತೆಯಾಗಿದ್ದನು. ಈತನ ಈ ದುಷ್ಕೃತ್ಯಕ್ಕೆ ಇಬ್ಬರು ಮಕ್ಕಳು ಅನಾಥವಾಗಬೇಕಾಯಿತು.

ಪಟ್ಟಣದ ಪಂಪ್ ಹೌಸ್ ಬೀದಿಯ ವಾಸಿ ಜಗದೀಶ (38) ಎಂಬಾತನೇ ಆರೋಪಿಯಾಗಿದ್ದಾನೆ. ಬಂಧಿತ

ಪ್ರೀತಿಸಿ ಮದುವೆಯಾಗಿ 17 ವರ್ಷ ಸಂಸಾರ ಮಾಡಿದ ನಂತರ ಮೆಡಿಕಲ್ ಶಾಪ್ ಇಟ್ಟು ಕೈಸುಟ್ಟು ಕೊಂಡಿದ್ದ ಪತಿ ಜಗದೀಶ ತನ್ನ ಪತ್ನಿ ಅಶ್ವಿನಿ(36)ಯನ್ನು ಜು.20ರಂದು ಬರ್ಬರವಾಗಿ ಕೊಲೆಗೈದಿದ್ದನು. ಮಾರಕಾಸ್ತ್ರದಿಂದ ಚುಚ್ಚಿ ಅಶ್ವಿನಿಯನ್ನು ಕೊಲೆ ಮಾಡಿದ

ಪ್ರಕರಣ ದಾಖಲಿಸಿಕೊಂಡಿದ್ದ ಬೇಲೂರು ಠಾಣೆಯ ಪೊಲೀಸರು ಜಗದೀಶ್‌, ಇತನ ತಾಯಿ ರಾಜಮ್ಮ,ತಂದೆ ನಾಗರಾಜ ಮೇಲೆ ಪ್ರಕರಣ ದಾಖಲಿಸಿದ್ದರು. ಆದರೆ ಪ್ರಕರಣದ ಆರೋಪಿಗಳಾದ ರಾಜಮ್ಮ, ನಾಗರಾಜ ಇಬ್ಬರನ್ನು ಈ ಹಿಂದೆಯೇ ಪೊಲೀಸರು ಬಂಧಿಸಿದ್ದರು. ಆದರೆ ಪ್ರಮುಖ ಆರೋಪಿ ಜಗದೀಶ್ ತಲೆ ಮರೆಸಿಕೊಂಡಿದ್ದನು. ಅಂತೂ ಈತನನ್ನು ಇಂದು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಆರೋಪಿ ಜಗದೀಶ್‌ ನನ್ನು ವಿಚಾರಣೆಗೊಳಪಡಿಸಲಾಗಿದೆ.