ಹಾಸನ ಜಿಲ್ಲೆಯ ಹಲವೆಡೆ ಭೂಕಂಪನ

0

ಹಾಸನ : ಹಾಸನ ಜಿಲ್ಲೆಯ ಹಲವೆಡೆ ಇಂದು ಮುಂಜಾನೆ ಭೂಮಿ ಕಂಪಿಸಿರುವ ಅನುಭವವಾಗಿದ್ದು, ಜನರು ಭಯಭೀತರಾಗಿ ಮನೆಯಿಂದ ಹೊರಗೆ ಓಡಿ ಬಂದಿರುವ ಸಂದರ್ಭಗಳು ನಡೆದಿದೆ

ಅರಕಲಗೂಡು ತಾಲೂಕಿನ ಗೊರೂರು , ಹನೆಮಾರನಹಳ್ಳಿ, ಕಾರಹಳ್ಳಿ, ಮುದ್ದೆನಹಳ್ಳಿ , ದಡದಹಳ್ಳಿಯಲ್ಲಿ ಮತ್ತು ಕಟ್ಟಾಯ ಹೋಬಳಿಯ ಬನವಾಸೆಯಲ್ಲಿ ಹಾಗೂ ಹಾಸನ ಹೊಳೆನರಸೀಪುರ ದ ಹಳ್ಳಿ ಮೈಸೂರಿನ  ದೇವರ ಗುಡ್ಡೇನಹಳ್ಳಿಯಲ್ಲಿ ಕೆಲವೆಡೆ ಶಬ್ದದ ಅನುಭವ ಹಂಚಿಕೊಂಡಿದ್ದಾರೆ. ಮುಂಜಾನೆ 4.38 ರ ಸುಮಾರಿಗೆ ಭೂಕಂಪನವಾಗಿದ್ದು, ಜನರು ಭಯಭೀತರಾಗಿ ಮನೆಯಿಂದ ಹೊರಗೆ ಓಡಿ ಬಂದಿದ್ದಾರೆ.

ಇಂದು ಮುಂಜಾನೆ 4.38 ರ ಸುಮಾರಿಗೆ ಹಲವು ಗ್ರಾಮಗಳಲ್ಲಿ ಭೂಮಿಯಿಂದ ಭಾರೀ ಶಬ್ಧ ಕೇಳಿ ಬಂದಿದ್ದು, ಬಳಿಕ ಭೂಮಿ ಕಂಪಿಸಿರುವ ಅನುಭವವಾಗಿದೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.

ನಿಮಗೂ ನಿಮ್ಮೂರಿನಲ್ಲು ಇಂತಹ ಅನುಭವ ವಾಗಿದ್ದರೆ ನಿಮ್ಮ ಊರಿನ ಹೆಸರು ಸಮೇತ ಕಮೆಂಟ್ ಮಾಡಿ.

LEAVE A REPLY

Please enter your comment!
Please enter your name here