ಹಾಸನ ಜಿಲ್ಲೆಯ ಹಳೆಬೀಡಿನ ಸುತ್ತಮುತ್ತ , ಹಾಸನ ನಗರದ ದಾಸರಕೊಪ್ಪಲಿನ ಹಲವೆಡೆ ಭೂಮಿ ಕಂಪಿಸಿದ ಅನುಭವ : ಜನರಲ್ಲಿ ಆತಂಕ

0

ಹಾಸನ: ಹಾಸನ ಜಿಲ್ಲೆಯ ಬೇಲೂರು ತಾಲ್ಲೂಕಿನ ಹಳೆಬೀಡಿನ ಸುತ್ತಮುತ್ತ ಭೂಮಿ ಕಂಪಿಸಿದ ಅನುಭವವಾಗಿದೆ ಎನ್ನಲಾಗಿದ್ದು, ಜನರು ಆತಂಕದಿಂದ ಮನೆಯಿಂದ ಹೊರ ಓಡಿ ಬಂದು ತಮಗೆ ಆದ ಅನುಭವನ್ನು ಹಂಚಿಕೊಂಡಿದ್ದಾರೆ ಅಂತ ಪ್ರಾಥಮಿಕ ಮೂಲಗಳಿಂದ ತಿಳಿದು ಬಂದಿದೆ.

ಹಾಸನ ಜಿಲ್ಲೆಯ ಬೇಲೂರು ತಾಲೂಕಿನ ಹಳೇಬೀಡು ಭಾಗದ ದ್ಯಾವಪ್ಪನಹಳ್ಳಿ, ನಿಂಗಪ್ಪನಕೊಪ್ಪಲು ಸೇರಿದಂತೆ ಹಗರೆ ಗ್ರಾಮದ ವಿವಿಧ ಭಾಗಗಳಲ್ಲಿ ಕಂಪನದ ಅನುಭವ ಉಂಟಾಗಿದೆ. ,‌ಅಲ್ಲದೇ ಹಾಸನ ನಗರದ ದಾಸರ ಕೊಪ್ಪಲು ಸುತ್ತ ಮುತ್ತ ಎಲ್ಲೋ ಬಾರಿ ಶಬ್ದ ಕೇಳಿಸಿದೆ ,

ಭೂಮಿ ಕಂಪಿಸಿದ್ದರಿಂದಾಗಿ ಜನರು ಮನೆಯಿಂದ ಹೊರಗೆ ಓಡಿ ಬಂದು ಆತಂಕದಲ್ಲಿ ಕೆಲ ಕಾಲ ಕಳೆದಿದ್ದಾರೆ ಎನ್ನಲಾಗಿದೆ

ಘಟನೆ ಬಗ್ಗೆ ಮಾಹಿತಿ ಪಡೆದುಕೊಂಡು ಸ್ಥಳಕ್ಕೆ ಬಂದ ಹಳೇಬಿಡು ಪೊಲೀಸ್ ಠಾಣಾ ಸಿಬ್ಬಂದಿಗೆ ಘಟನೆ ಬಗ್ಗೆ ಮಾಹಿತಿ ಪಡೆದುಕೊಂಡು ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಜೊತೆಗೆ ಸಂಪರ್ಕ ನಡೆಸುತ್ತಿದ್ದಾರೆ ಎನ್ನಲಾಗಿದೆ.

ಇನ್ನು ಹಾಸನ ನಗರದ ಬಹುತೇಕ ಸ್ಥಳದಲ್ಲಿ ಅಂತಂದೇನಿಲ್ಲ !! ಭೂ ತಜ್ಞರು ಇದರ ಬಗ್ಗೆ ಹೆಚ್ಚಿನ ಮಾಹಿತಿ ನೀಡ ಬೇಕಿದೆ

ಘಟನೆ ನಡೆದ ಸಮಯ : 4.03PMರಿಂದ 5.32PM

ಅರಸೀಕೆರೆ – ತಾಲ್ಲೂಕು ಜಾವಗಲ್ ಮತ್ತು ಗಂಡಸಿ ಹೋಬಳಿಯ ರಂಗಾಪುರ, ಕರಗುಂದ ಸುತ್ತಮುತ್ತ ಗ್ರಾಮಗಳಲ್ಲಿ ಭೂಕಂಪನ,

ಯಾವುದೇ ಪ್ರಾಣಾಪಾಯ ಇಲ್ಲಾ‌,‌ ಮನೆಗಳಿಗೂ ಹಾನಿ ಇಲ್ಲಾ.
ಮನೆ ಗೋಡೆಗಳು ಕಂಪಿಸಿ ಮನೆ ಪಾತ್ರೆಗಳು ಅಲುಗಾಡಿವೆ,
ಸ್ಥಳಕ್ಕೆ ಅರಸೀಕೆರೆ ತಹಶೀಲ್ದಾರ್ ಸಂತೋಷ್ ಕುಮಾರ್ ಭೇಟಿ ಪರಿಶೀಲನೆ.

ಭೂಕಂಪನದ ತೀವ್ರತೆ ಪರಿಶೀಲಿಸುತ್ತಿರುವ ಭೂವಿಜ್ಞಾನ ಇಲಾಖೆ ಅಧಿಕಾರಿಗಳು

ಹೀಗೂ ಉಂಟೇ ??

Approx 5.15 i too felt in hassan while sitting on terrace

LEAVE A REPLY

Please enter your comment!
Please enter your name here