ನಮ್ಮೂರು ಸಕಲೇಶಪುರ ತಾಲ್ಲೂಕಿನ #ಹಾನುಬಾಳು , #ಉದ್ದಿಗುಡ್ಡ_ಜಾತ್ರೆ (ಗುಂಡುಬಹ್ಮ ಜಾತ್ರೆ)
*ಸುಮಾರು 300 ವರ್ಷಗಳ ಹಿಂದೆ ಹಾನುಬಾಳು ಗ್ರಾಮದಲ್ಲಿ ಋಷಿಮುನಿಗಳು ಬಂದು ನೆಲೆಸಿದ್ದ ಜಾಗವಿದು., ಇಲ್ಲಿನ ಆರಾಧ್ಯ ದೈವ ಗುಂಡು ಬ್ರಹ್ಮ ದೇವರು ಎಂದು ನಂಬಲಾಗುತ್ತದೆ , ಈ ದೇವರಿಗೆ ಪ್ರತೀ ವರ್ಷ ಬಲಿಪಾಡ್ಯಮಿಯ ದಿನದಂದು ರಾತ್ರಿ ದೇವರಿಗೆ ವಿಶೇಷ ಪೂಜೆ ಮಾಡಿ ಅದೇ ದಿನ ಬೆಳಗಿನ ಜಾವ ಕೆಂಡೋತ್ಸವ ವಿರುತ್ತದೆ .,
ಬಲಿಪಾಡ್ಯಮಿಯ ಮಾರನೆ ದಿನ ದೇವರಿಗೆ ಜಾತ್ರಾ ಮಹೋತ್ಸವ ಇರುತ್ತದೆ ; ಹಾನುಬಾಳಿನ ಗುಡ್ಡದಲ್ಲಿ : ಹಾನುಬಾಳು , ಅಗನಿ ಹಾಗೂ ಮಕ್ಕಿಹಳ್ಳಿ ಎಂಬ 3 ಊರಿನ ಗುಂಡುಬ್ರಹ್ಮ ದೇವರ ಜಾತ್ರೆಯನ್ನು ಒಟ್ಟುಗೂಡಿ ನೆರವೇರಿಸುತ್ತಾರೆ .
( 9 ಗುಂಡು ಬ್ರಹ್ಮ ದೇವರು ಅಣ್ಣ ತಮ್ಮಂದಿರು) ಈಗ ಕೇವಲ ಮೂರು ದೇವರ ಜಾತ್ರೆಯನ್ನು ನಡೆಸಿಕೊಂಡು ಬರಲಾಗುತ್ತಿದೆ.
- ಈ ಮೂರು ದೇವರ ನಂದಿಯನ್ನು (ಅಡ್ಡೆ ) ಚಂಡು ಹೂವಿನಿಂದ ಅಲಂಕರಿಸಲಾಗುತ್ತದೆ . ಬೇರೇ ಯಾವುದೇ ದೇವರಿಗು ಚಂಡು ಹೂವಿನಿಂದ ಪೂಜಿಸುವುದಿಲ್ಲ.,
*ಇನ್ನೊಂದು ವಿಶೇಷ ವೆಂದರೆ ಮಕ್ಕಿಹಳ್ಳಿ ಮತ್ತು ಹಾನುಬಾಳುವಿನ ಜನರಿಗು ಒಂದು ಪಂದ್ಯ ಏರ್ಪಡುತ್ತದೆ., 3 ಬಿದುರನ್ನು (ಬೊಂಬನ್ನು) ಬಳಸಿ ಸತ್ತಿಗೆಯನ್ನು ನಿರ್ಮಿಸಿರುತ್ತಾರೆ ., ಇದರಲ್ಲಿ ಎರಡು ಊರಿನ ( ಹಾನುಬಾಳು ಮತ್ತು ಮಕ್ಕಿ ಹಳ್ಳಿ) ಜನರಿಗು ಪೈಪೋಟಿ ಏರ್ಪಡುತ್ತದೆ ., ಯಾವ ಊರಿನ ಸತ್ತಿಗೆ ಅತಿ ಹೆಚ್ಚು ಉದ್ದ ವಿರುತ್ತದೆಯೋ ಎಂದು ಅಳತೆಮಾಡಿ , ಗೆದ್ದ ತಂಡಕ್ಕೆ ಬಹುಮಾನ ನೀಡಲಾಗುತ್ತದೆ ., ಇಂದು 80-100 ಅಡಿಗೂ ಹೆಚ್ಚು ಉದ್ದವಿರುತ್ತದೆ .,
- ಈ ದೇವರ ಉತ್ಸವವನ್ನು ಪ್ರತೀ ವರ್ಷ ಪಟೇಲ್ ಮನೆತನದ ಸಾರಥ್ಯದಲ್ಲಿ ಊರಿನ ಸಹಕಾರದೊಂದಿಗೆ ನಡೆಸಿಕೊಂಡು ಬರುತ್ತಿದ್ದಾರೆ .