Belur

ನವದೆಹಲಿಯ ಪರೇಡ್ ಗ್ರೌಂಡ್ (ಆರ್ಮಿ ಕಂಟೈನ್ಮೆಂಟ್) ನಲ್ಲಿ ನಡೆದ ಆಲ್ ಇಂಡಿಯಾ ತಲ್ ಸೈನಿಕ್ ಕ್ಯಾಂಪ್-2022ನಲ್ಲಿ ನಮ್ಮ ಬೇಲೂರಿನವ

By

October 18, 2022

ಆಲ್ ಇಂಡಿಯಾ ತಲ್ ಸೈನಿಕ್ ಕ್ಯಾಂಪ್ -2022ಹಾಸನ ಜಿಲ್ಲೆಯ ಬೇಲೂರು ತಾಲೂಕಿನ S. ಬೊಮ್ಮಡಿಹಳ್ಳಿಯ ಗಂಗಾಧರ್ ಬಿ.ಕೆ ಅವರ ಪುತ್ರನಾದ ಯಶವಂತ್ ಬಿ ಜಿ ಅವರು ಸೆಪ್ಟೆಂಬರ್ 15 ರಿಂದ ಸೆಪ್ಟೆಂಬರ್ 25ರವರೆಗೆ ನವದೆಹಲಿಯ ಪರೇಡ್ ಗ್ರೌಂಡ್ (ಆರ್ಮಿ ಕಂಟೈನ್ಮೆಂಟ್) ನಲ್ಲಿ

ನಡೆದ ಆಲ್ ಇಂಡಿಯಾ ತಲ್ ಸೈನಿಕ್ ಕ್ಯಾಂಪ್-2022 ರಲ್ಲಿ ರಾಷ್ಟ್ರೀಯ ಕ್ರೆಡಿಟ್ ಕೋಪ್ಸ್ ನ ಸೈನ್ಯದಳದ ಕರ್ನಾಟಕ ಮತ್ತು ಗೋವಾ ನಿರ್ದೇಶನಾಲಯದಿಂದ ಸೀನಿಯರ್ ಕೆಡಟ್ ಯಶವಂತ್ ಬಿಜಿ ಅವರು ಆಯ್ಕೆಯಾಗಿ

ಪ್ರತಿನಿಧಿಸುತ್ತಾರೆ. ಕರ್ನಾಟಕ ಮತ್ತು ಗೋವಾ ನಿರ್ದೇಶನಾಲಯದಲ್ಲಿ ಒಟ್ಟು 74,109 ಕಾಡೆಟ್ಸ್ ಇದ್ದು ಅದರಲ್ಲಿ ಸತತವಾಗಿ 7 ಕ್ಯಾಂಪ್ ಗಳನ್ನು ನಡೆಸಿ 49 ಕೆಡೆಟ್ಸ್ ಅನ್ನು ಆಯ್ಕೆ ಮಾಡಲಾಗಿದ್ದು ಅದರಲ್ಲಿ ಯಶ್ವಂತ್ ಬಿಜಿ ಅವರು ಸಹ ಒಬ್ಬರು.