Hassan

75 ನೇ ಸ್ವಾತಂತ್ರೋತ್ಸವದ ಅಮೃತ ಮಹೋತ್ಸವದ ಅಂಗವಾಗಿ ಹಾಸನದಲ್ಲಿ ಕಾಂಗ್ರೆಸ್ ಬೃಹತ್ ಪಾದಯಾತ್ರೆ

By

August 10, 2022

ಹಾಸನ : 75 ನೇ ಸ್ವಾತಂತ್ರೋತ್ಸವದ ಅಮೃತ ಮಹೋತ್ಸವ ಪಾದಯಾತ್ರೆ ಕಾರ್ಯಕ್ರಮದ ಮೊದಲನೆಯ ದಿನದ ಅಂಗವಾಗಿ ಇಂದು ಹಾಸನ  ವಿಧಾನಸಭಾ ಕ್ಷೇತ್ರದ ಕಸಬಾ ಹೋಬಳಿಯ ಗವೇನಹಳ್ಳಿ ಗ್ರಾಮದ ಶ್ರೀ ಆಂಜನೇಯಸ್ವಾಮಿ ದೇವಸ್ಥಾನಕ್ಕೆ ಪೂಜೆ ಸಲ್ಲಿಸಿ ಅಲ್ಲಿಂದ

ಹೊರಟ ಯಾತ್ರೆಯಲ್ಲಿ ಹಾಸನ ನಗರ ಮತ್ತು ಗ್ರಾಮಾಂತರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರುಗಳು ಕಾಂಗ್ರೆಸ್ ಮುಖಂಡರಾದ ಬಿ ಕೆ ರಂಗಸ್ವಾಮಿ (ಬನವಾಸೆ)ಯವರು ಎಚ್ ಕೆ ಮಹೇಶ್ ರವರು ಜವರೇಗೌಡ್ರು ಬಾಗೂರು ಮಂಜೇಗೌಡರು ದೇವರಾಜೇಗೌಡರು ಯುವ ಕಾಂಗ್ರೆಸ್ ಅಧ್ಯಕ್ಷರಾದ ರಂಜಿತ್ ಗೊರೂರು ಮಹಿಳಾ ಕಾಂಗ್ರೆಸ್ ಅಧ್ಯಕ್ಷರಾದ ತಾರಾಚಂದನ್ ಅಲ್ಪಸಂಖ್ಯಾತರ ಘಟಕದ ಜಿಲ್ಲಾಧ್ಯಕ್ಷರಾದ ಅಬ್ದುಲ್ ಸಮದ್ ಹಾಗೂ

ಸೇವಾದಳ ಮಹಿಳಾ ಕಾಂಗ್ರೆಸ್ ಯುವ ಕಾಂಗ್ರೆಸ್ ಪರಿಶಿಷ್ಟ ಜಾತಿ ಪರಿಷ್ಟ ಪಂಗಡ ಘಟಕ ಹಾಗೂ ಕಾಂಗ್ರೆಸ್ ಮುಖಂಡರುಗಳು ಕಾರ್ಯಕರ್ತರು ಪದಾಧಿಕಾರಿಗಳು ಮೆರವಣಿಗೆಯಲ್ಲಿ ಗವೇನಹಳ್ಳಿ ಮೂಲಕವಾಗಿ ರಾಜಘಟ್ಟ ಪೃಥ್ವಿ ಟಾಕೀಸ್ ಆಡುವಳ್ಳಿ ಉದಯಗಿರಿ ಕುವೆಂಪುನಗರ ಶಂಕರಮಠ ರಸ್ತೆ ಮೂಲಕ ಮಹಾತ್ಮ ಗಾಂಧಿ ರಸ್ತೆ ತಲುಪಿ ಮಧ್ಯಾಹ್ನದ ಉಪಾಹಾರ ಸೇವಿಸಿದರು