Holenarasipura

KRS ಪಕ್ಷ vs Holenarasipura police vs Holenarasipura People

By

August 18, 2022

ಪ್ರತಿಭಟನೆ ವರ್ಸಸ್ ಪ್ರತಿಭಟನೆ

ಹೊಳೆನರಸೀಪುರ: ಪಟ್ಟಣದಲ್ಲಿ ಕೆಆರ್‌ಎಸ್ ಪಕ್ಷದ ಮುಖಂಡರ ಮೇಲೆಕೆಲ ದಿನಗಳ ಹಿಂದೆ ನಡೆದ ಹಲ್ಲೆ ಖಂಡಿಸಿ ಇಂದು ಪಕ್ಷದ ವತಿಯಿಂದ ರಾಜ್ಯಾಧ್ಯಕ್ಷ ರವಿ ಕೃಷ್ಣಾರೆಡ್ಡಿ ನೇತೃತ್ವದಲ್ಲಿ ಹಮ್ಮಿಕೊಂಡಿದ್ದ ಹೊಳೆನರಸೀಪುರ ಚಲೋ ವೇಳೆ ಮತ್ತೆ ಗುಂಪು ಘರ್ಷಣೆ ನಡೆದಿದೆ.ಈ ವೇಳೆ ಗುಂಪೊಂದು ಕಾರ್ಯಕರ್ತರೊಬ್ಬರ ಮೇಲೆ ಕಲ್ಲು ತೂರಿದೆ. ಮತ್ತೊಂದೆಡೆ

ಕೆಆರ್‌ಎಸ್ ಪಕ್ಷದಿಂದ ಆಯೋಜಿಸಿದ್ದ ಚಲೋ ಪ್ರತಿಭಟನೆಗೆ ಸ್ಥಳೀಯರು ಹಾಗೂ ಸಾರ್ವಜನಿಕರೂ ತಿರುಗಿ ಬಿದ್ದು ಪ್ರತಿಭಟನೆಗೆ ಮುಂದಾದರು. ಸಾವಿರಾರು ಜನ ಜಮಾಯಿಸಿದ್ದರಿಂದ ಪರಿಸ್ಥಿತಿ ಬಿಗಡಾಯಿಸಿತು. ಸುದ್ದಿ ತಿಳಿಯುತ್ತಿದ್ದಂತೆಯೇ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಂ ಶಂಕರ್ ಆಗಮಿಸಿ

ಪರಿಸ್ಥಿತಿ ತಿಳಿಗೊಳಿಸುವ ಪ್ರಯತ್ನ ಮಾಡಿದರು. ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಾಕಾಬಂದಿ ಹಾಕಲಾಗಿದ್ದು, ಮುನ್ನೆಚ್ಚರಿಕೆಯಾಗಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ.