Belur

ಕಳೆದ ನಾಲ್ಕು ದಿನಗಳಿಂದ ನಾಪತ್ತೆಯಾಗಿದ್ದ ಯುವಕ ಶವವಾಗಿ ಪತ್ತೆ

By Hassan News

December 03, 2022

ಹಾಸನ : ಜೀವನದಲ್ಲಿ ಜಿಗುಪ್ಪೆ ಗೊಂಡು ಯುವಕನೊಬ್ಬ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಮನೆಯಲ್ಲಿ ಡೆತ್ ನೋಟ್ ಬರೆದಿಟ್ಟು ಕಳೆದ ನಾಲ್ಕು ದಿನಗಳಿಂದ ನಾಪತ್ತೆಯಾಗಿದ್ದ ಬಿಕೋಡು ಗ್ರಾಮದ 26 ವರ್ಷದ ಯುವಕ ಸಂದೀಪ್ ಆಚಾರ್ಯ ನ ಮೃತ ದೇಹ ಶನಿವಾರ ಬೆಳಗ್ಗೆ

ಆಲೂರು ತಾಲ್ಲೂಕಿನ ವಾಟೆಹೊಳೆ ಜಲಾಶಯದ ಹಿನ್ನೀರಿನಲ್ಲಿ ಪತ್ತೆಯಾಗಿದೆ ಹಲವು ದಿನಗಳಿಂದ ಜೀವಕ್ಕೆ ಮಾರಕವಾದ ಕಾಯಿಲೆಗೆ ತುತ್ತಾಗಿದ್ದ ಯುವಕ ಡೆತ್ ನೋಟ್ ಬರೆದಿಟ್ಟು ಕಳೆದ ನವೆಂಬರ್ 30ರಂದು

ನಾಪತ್ತೆಯಾಗಿದ್ದ ಈತ ಹಾಸನ ಜಿಲ್ಲೆಯ ಬೇಲೂರು ತಾಲ್ಲೂಕಿನ ಅರೇ ಹಳ್ಳಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು.

ಮನವಿ :ಹುಟ್ಟು ಖಚಿತ , ಸಾವು ನಿಶ್ಚಿತ ಆದರೆ ಜೀವ ಕಳೆದು ಕೊಳ್ಳೋದು ವಿಧಯಾಟವೇ ಆಗಿರಬೇಕು ಒರತು ನಮ್ಮದಾಗಿರಬಾರದು .