Hassan

ಮಗ ಕಾಣೆಯಿಂದ ಮನನೊಂದ ಕುಟುಂಬಸ್ಥರಿಂದ ಮುಗಿಲು ಮುಟ್ಟಿದ ಆಕ್ರಂದನ

By Hassan News

February 07, 2023

ಹಾಸನ: ಹಣಕಾಸು ವಿಷಯಕ್ಕೆ ಯುವಕನನ್ನು ಕಿಡ್ನಾಪ್ ಮಾಡಿರುವ ಪ್ರಕರಣ ಹೊಯ್ಸಳ ನಗರದಲ್ಲಿ ನಡೆದಿದೆ. , ಕಿಡ್ನಾಪ್ ಆಗಿರುವ ಯುವಕ ಲಿಖಿತ್‌ಗೌಡ (26) ಅಲಿಯಾಸ್ ಬಂಗಾರಿಯ ಸುಳಿವು ನಾಲ್ಕು ದಿನವಾದರು ಪತ್ತೆಯಾಗಿಲ್ಲ. , ಈ ಬಗ್ಗೆ ಪೊಲೀಸ್ ಠಾಣೆಯಲ್ಲು ಪ್ರಕರಣ ದಾಖಲಾಗಿದ್ದು ,‌ ಹಾಸನ್  ನ್ಯೂಸ್ ಸಾಮಾಜಿಕ ಜಾಲತಾಣದಲ್ಲು ಕಾಣೆಯಾದ ವರದಿ ಪ್ರಕಟವಾಗಿತ್ತು ,

ಸರ್ವಿಸ್ ಸ್ಟೇಷನ್ ನಡೆಸುತ್ತಿದ್ದ ಲಿಖಿತಗೌಡ ಕಳೆದ ಐದು ತಿಂಗಳ ಹಿಂದೆ ವಿವಾಹವಾಗಿದ್ದನಷ್ಟೇ . ಟ್ಯಾಂಕರ್ ಸರ್ವಿಸ್‌ಗೆ ಬರುತ್ತಿದ್ದ ಟ್ಯಾಂಕರ್ ಚಾಲಕ ಸಾಗರ್ ನೊಂದಿಗೆ ಸ್ನೇಹ ಬೆಳೆದಿದ್ದು , ಈ ವೇಳೆ ಲಿಖಿತ್‌ ಗೌಡನಿಂದ ಸಾಗ‌ರ್ 2.5 ಲಕ್ಷ ರೂ. ಸಾಲ ಪಡೆದಿದ್ದ. ಇತ್ತೀಚೆಗೆ ಹಣ ವಾಪಾಸ್ ನೀಡದಿದ್ದಕ್ಕೆ ಇಬ್ಬರ ನಡುವೆ ಜಗಳ ನಡೆದಿತ್ತು. ಇದರಿಂದ ಕೋಪಗೊಂಡ ಲಿಖಿತ್‌ಗೌಡ ಹತ್ತು ಲಕ್ಷದ ಚೆಕ್ ಬೌನ್ಸ್ ಕೇಸ್‌ಹಾಕಿ, ಸಾಗರ್‌ನ ಸ್ಕೂಟರ್ ತೆಗೆದುಕೊಂಡು ಬಂದಿದ್ದ. ಇದೇ ಕಾರಣಕ್ಕೆ

ಇಬ್ಬರ ನಡುವೆ ಪುನಃ ಜಗಳ ನಡೆದಿತ್ತು. , ಫೆ.5 ರಂದು ಸಂಜೆ 6.30 ಸುಮಾರಿಗೆ ಹಣ ಕೊಡುವುದಾಗಿ ಸಾಗರ್ ಹಾಗೂ ಸ್ನೇಹಿತರು ಓಮಿನಿ ಕಾರಿನಲ್ಲಿ ಲಿಖಿತ್‌ಗೌಡನನ್ನು ಕರೆದುಕೊಂಡು ಹೋಗಿದ್ದರು . ಅಂದಿನಿಂದಲೂ ಎಲ್ಲರ ಫೋನ್ ಸ್ವಿಚ್ ಆಫ್ ಆಗಿದೆ. ಅದೇನಾಗಿದೆ ಗೊತ್ತಿಲ್ಲ , ಆದರೆ ನಗರಾದ್ಯಂತ ಈ ಬಗ್ತೆ ಬಿಸಿ ಬಿಸಿ ಚರ್ಚೆಯಾಗ್ತಿದೆ .

ಇದರಿಂದ ಆತಂಕ ಗ೦ಡಿ ರ ವ ಲಿಖಿತ್‌ ಗೌಡ ಪತ್ನಿ ಹಾಗೂ ಪೋಷಕರು ಕೆ.ಆರ್.ಪುರಂ ಪೊಲೀ ಸ್ ಠಾಣೆಯಲ್ಲಿ ಮಿಸ್ಸಿಂಗ್ ಕೇಸ್ ದಾಖಲು ಮಾಡಿದ್ದು, ಪ್ರಕರಣ ದಾಖಲು ಮಾಡಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ತೀವ್ರ ವಿಚಾರಣೆ

ಹಣಕಾಸು ವಿಚಾರಕ್ಕೆ ಕಿಡ್ನಾಪ್ ಆಗಿರುವ ಲಿಖಿತ್ ಗೌಡ ಅವರ ಕುಟುಂಬದವರನ್ನು ಬಡಾವಣೆ ಠಾಣೆಗೆ ಕರೆದು ವಿಚಾರ ನಡೆಸಲಾಗುತ್ತಿದ್ದು, ಸಾಗರ್ ಲಿಖಿತ್ ಹಾಗೂ ನವೀನ್ ನಡುವೆ ಜಗಳ ನಂತರ ಪ್ರಕರಣ ಯಾವ ತಿರುವು ಪಡೆದಿದೆ ಎಂಬುದರ ಬಗ್ಗೆ ಎಲ್ಲಾ ಪೊಲೀಸರ ಆಯಾಮಗಳಿಂದಲೂ ತಿನಿಖೆ ಮುಂದುವರೆಸಿದ್ದು ಸಂಜೆ ವೇಳೆಗೆ ಪ್ರಕರಣ ಕುರಿತು ನಿಖರ ಮಾಹಿತಿ ಲಭ್ಯವಾಗುವ ಸಾಧ್ಯತೆ ಇದೆ

Name:-LIKITH GOWDA(Bangari)MISSING FROM YESTERDAY EVENING 6:00.P.M.Vehicle and vehicle number:-silver colour omini, KA41MA9231While missing wearing purple shirt n black jeansIf found contact:-8722615347, 9481199007, 8431999721