Politics

ನನ್ನ ಜೊತೆಗೆ ಕ್ಷೇತ್ರದ 2 ಲಕ್ಷ ಜನ ಮತದಾರರಿದ್ದಾರೆ – ಪ್ರೀತಂ ಗೌಡ

By Hassan News

April 26, 2023

ಇಂದು ನಡ್ಡಾ ಆಗಮನ, 30ಕ್ಕೆ ಮೋದಿ ಪ್ರಚಾರಹಾಸನದತ್ತ ಕೇಂದ್ರ ನಾಯಕರು: ಹೆಚ್ಚಿನ ಸ್ಥಾನ ಗೆಲ್ಲಲು ಬಿಜೆಪಿ ರಣತಂತ್ರಅಮಿತ್‌ ಶಾ ಅವರು ಜಿಲ್ಲೆಗೆ ಭೇಟಿ ನೀಡಿದ್ದು, ಇದೀಗ ಪ್ರಧಾನಿ ನರೇಂದ್ರ ಮೋದಿಯವರೂ ಜಿಲ್ಲೆಗೆ ಬರಲಿದ್ದಾರೆ. , ಏಪ್ರಿಲ್ 30 ರಂದು ಬೇಲೂರು ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಹುಲ್ಲಹಳ್ಳಿ ಸುರೇಶ್ ಪರ ಪ್ರಚಾರ ಮಾಡಲು ಪ್ರಧಾನಿ ನರೇಂದ್ರ ಮೋದಿ ಬರುತ್ತಿದ್ದಾರೆ. ಈ ಸಂದರ್ಭದಲ್ಲಿ

ಬೇಲೂರಿನ ಪಟ್ಟಣದಲ್ಲಿ ಬೃಹತ್ ರೋಡ್ ಶೋ ನಡೆಸಿ, ಮತಯಾಚನೆ ಮಾಡಲಿದ್ದಾರೆ., ಸಂಸದ ಬಿ.ವೈ.ರಾಘವೇಂದ್ರ ಹಾಗೂ ಮಾಜಿ ಸಚಿವ ಎಸ್‌. ಅಂಗಾರ ಸೇರಿದಂತೆ ಕೇಂದ್ರ ಬಿಜೆಪಿ ನಾಯಕರು ಪ್ರಚಾರ ನಡೆಸಲಿದ್ದಾರೆ.

ಏ.23 ರಂದು ಅರಸೀಕೆರೆ ಕ್ಷೇತ್ರದ ಅಭ್ಯರ್ಥಿ ಜಿ.ವಿ.ಟಿ. ಬಸವರಾಜ ಪರ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತಯಾಚನೆ ಮಾಡಿದ್ದು ಈ ಮೂಲಕ ಜಿಲ್ಲೆಯಲ್ಲಿ 3ರಿಂದ 4ಸ್ಥಾನ ನಿರೀಕ್ಷೆಯಲ್ಲಿ ಬಿಜೆಪಿ ಇದೆ ,

ಇತ್ತ ಜೆಡಿಎಸ್ ವರೀಷ್ಠ ಹೆಚ್ ಡಿ ರೇವಣ್ಣ ಅವರು ಈ ವಿಷಯವಾಗಿ : ಜಿಲ್ಲೆಗೆ ಅವರೆಲ್ಲ ಬರಬೇಕಾದಿತೆ , ಇವರ ಕೆಲಸಗಳು ಮಾತನಾಡಬೇಕಿತ್ತಲ್ಲವೇ ಎಂದು ಮಾಧ್ಯಮ ಗೋಷ್ಠಿಯಲ್ಲಿ ಹೇಳಿದ್ದರೆ ., ಇತ್ತ ಪ್ರೀತಮ್ : ಜೆಡಿಎಸ್‌ನ ಘಟಾನುಘಟಿ ನಾಯಕರು ನನ್ನೊಬ್ಬನ ವಿರುದ್ಧ ಪ್ರಚಾರ ಮಾಡುತ್ತಿದ್ದಾರೆ. ನನ್ನ ಜೊತೆಗೆ ಕ್ಷೇತ್ರದ 2 ಲಕ್ಷ ಜನ ಮತದಾರರಿದ್ದಾರೆ , ರೇವಣ್ಣ ಅವರ ಕುಟುಂಬಕ್ಕೆ ರೇವಣ್ಣ ಅವರೇ ಚಾಣಕ್ಯರು. ಆದರೆ, ಪ್ರಧಾನಿ ಮೋದಿ, ಗೃಹ ಸಚಿವ ಅಮಿತ್ ಶಾ ಅವರು ಜನರ ಬೆಂಬಲದಿಂದ ಮೇಲಿನ ಸ್ಥಾನಕ್ಕೆ ಏರಿದವರು , ‘ನನ್ನ ಮತ್ತು ಕುಮಾರಸ್ವಾಮಿ ನಡುವೆ ವೈಯಕ್ತಿಕ ಸಂಬಂಧ

ಚೆನ್ನಾಗಿದೆ. ಅವರು ನನ್ನ ಹಿತವನ್ನೇ ಬಯಸುತ್ತಾರೆ. ಕುಮಾರಸ್ವಾಮಿಯವರ ಬಗ್ಗೆ ನಾನು ಏನನ್ನೂ ಮಾತನಾಡುವುದಿಲ್ಲ’ ಎಂದರು.