ಮೋಜು-ಮಸ್ತಿ ?? ಮೂಕನಮನೆ ಜಲಪಾತದಲ್ಲಿ ಇಬ್ಬರು ಯುವಕರ ದುರ್ಮರಣ

0

ಹಾಸನ / ಸಕಲೇಶಪುರ : ಮೋಜು-ಮಸ್ತಿ ಮೂಕನಮನೆ  ಜಲಪಾತದಲ್ಲಿ ಇಬ್ಬರು ಯುವಕರ ದುರ್ಮರಣ 
ವನಗೂರು ಸಕಲೇಶಪುರ ತಾಲ್ಲೂಕಿನ ಹೆತ್ತೂರು ಹೋಬಳಿಯ ಮೂಕನಮನೆ ಜಲಪಾತದಲ್ಲಿ ಈಜಲು ಹೋಗಿ ಇಬ್ಬರು ಯುವಕರು ಮೃತಪಟ್ಟಿದ್ದಾರೆ ಸಕಲೇಶಪುರ ತಾಲೂಕಿನ ಚಿಕ್ಕ  ಕುಂದೂರು ಗ್ರಾಮದ ಕುಮಾರ್ 38 ವರ್ಷ ಹಾಗೂ ಕೊಡಗಿನ ಕೊಡ್ಲಿಪೇಟೆ ನಿವಾಸಿ ಕಿಶೋರ್ 34 ವರ್ಷ ಮೃತಪಟ್ಟ ದುರ್ದೈವಿಗಳು ನಾಲ್ಕು ಜನ ಸ್ನೇಹಿತರು

ಮೂಕನಮನೆ ಜಲಪಾತ ದ ಸಮೀಪದ ಅರಣ್ಯದಲ್ಲಿ ಮೋಜು-ಮಸ್ತಿ ಪಾರ್ಟಿ ಮಾಡಿ ಜಲಪಾತಕ್ಕೆ ಹೋಗಿದ್ದಾರೆ ಈ ಸಮಯದಲ್ಲಿ ಇಬ್ಬರೂ ಈಜಲು ಹೋಗಿ ಮೃತಪಟ್ಟಿದ್ದಾರೆ ಬೇಸಿಗೆಕಾಲ ಆಗಿರುವುದರಿಂದ ಜಲಪಾತದಲ್ಲಿ ಅತಿ ಹೆಚ್ಚು ನೀರು ಇರಲಿಲ್ಲ ಯುವಕರ ಬೇಜಾಬ್ದಾರಿಯಿಂದ ಮೃತಪಟ್ಟಿದ್ದಾರೆ ಎಂದು ಸ್ಥಳೀಯರು ತಿಳಿಸಿದ್ದಾರೆ ಪ್ರಕರಣ ಯಸಳೂರು ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ

LEAVE A REPLY

Please enter your comment!
Please enter your name here