Breaking News

ರಾಜಕೀಯ ವಿಚಾರಕ್ಕೆ ಶುರುವಾದ ಜಗಳ ?; ಮಚ್ಚಿನಿಂದ ಸ್ನೇಹಿತನ ಎಡಗೈಯನ್ನೇ ಕಡಿದೇಬಿಟ್ಟ

By Hassan News

January 24, 2023

ಹಾಸನ ಜಿಲ್ಲೆಯ ಸಕಲೇಶಪುರ ತಾಲ್ಲೂಕಿನ ಬಾಳ್ಳುಪೇಟೆಯ ಜೆಪಿ ನಗರದಲ್ಲಿ ಮತ್ತೆ ಹಣಕಾಸು ವಿಚಾರವಾಗಿ ಇಬ್ಬರ ನಡುವೆ ಮಾತುಕತೆ ಶುರುವಾಗಿದ್ದು, ಈ ಬಾರಿ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಗೆಲ್ಲುತ್ತಾರೆ ಎಂದು ಗುರುಮೂರ್ತಿ ಹೇಳಿದ್ದರೆ, ಇತ್ತ ರಮೇಶ್‌ ಜೆಡಿಎಸ್‌ ಅಭ್ಯರ್ಥಿ ಗೆಲ್ಲುತ್ತಾರೆ ಎಂದು ಹೇಳಿದ್ದಾನೆ. ಇದೆ ವಿಚಾರ ಅತಿರೇಕಕ್ಕೆ ಹೋಗಿ ಇಬ್ಬರ ನಡುವೆ ಜಗಳ ಶುರುವಾಗಿ ಪರಸ್ಪರ ತಳ್ಳಾಡಿಕೊಂಡಿದ್ದಾರೆ. ಅಲ್ಲಿಂದ ಸ್ಥಳೀಯರೇ ಇಬ್ಬರ ಜಗಳವನ್ನು ಬಿಡಿಸಿ ಕಳುಹಿಸಿದ್ದಾರೆ. , ಆದರೆ

ಹೊಸ್ಕಳ್ಳಿ ಗ್ರಾಮಕ್ಕೆ ಕಾರಿನಲ್ಲಿ ಬಂದ ರಮೇಶ್, ಹಣ ಕೊಡುತ್ತೇನೆ ಮನೆಯಿಂದ ಹೊರಗೆ ಬಾ ಎಂದು ಗುರುಮೂರ್ತಿಗೆ ಫೋನ್ ಮಾಡಿ ಕರೆದಿದ್ದಾನೆ. ಮನೆಯಿಂದ ಹೊರಗೆ ಬಂದ ಗುರುಮೂರ್ತಿ ಕಾರಿನ ಬಳಿ ಬರುತ್ತಿದ್ದಂತೆ ರಮೇಶ್‌ ಮಚ್ಚು ಬೀಸಿದ್ದಾನೆ. ಮಚ್ಚಿನಿಂದ ತಪ್ಪಿಸಿಕೊಳ್ಳಲು ಎಡಗೈ ಅಡ್ಡ ಕೊಟ್ಟಿದ್ದು, ತೀವ್ರ ಗಾಯಗೊಂಡಿದ್ದಾರೆ. , ಅಷ್ಟಕ್ಕು ಈ ಘಟನೆ ನಡೆಯೋಕೆ ಕಾರಣ ಎಂದರೆ … , ಗುರುಮೂರ್ತಿ ಬಿಜೆಪಿ ಪಕ್ಷದ ಕಾರ್ಯಕರ್ತನಾದರೆ, ರಮೇಶ್ ಜೆಡಿಎಸ್‌ ಪಕ್ಷದ ಕಾರ್ಯಕರ್ತನಾಗಿದ್ದ. ಆದರೆ, ಇವರಿಬ್ಬರೂ ಒಳ್ಳೆಯ ಸ್ನೇಹಿತರಾಗಿದ್ದರು. ಆದರೆ,

ಹಣದ ವಿಚಾರಕ್ಕೆ ಕಿರಿಕ್‌ ಶುರುವಾಗಿ ರಾಜಕೀಯ ರೂಪ ಪಡೆದಿದೆ. ಗುರುಮೂರ್ತಿ ಬಳಿ ರಮೇಶ್‌ 85 ಸಾವಿರ ರೂಪಾಯಿ ಪಡೆದಿದ್ದ. ಹಣವನ್ನು ವಾಪಸ್ ಕೊಡವಂತೆ ಗುರುಮೂರ್ತಿ ಕೇಳಿದ್ದರು. ಈ ವೇಳೆ ರಮೇಶ್ ಹಣ ಕೊಡುತ್ತೇನೆ ಎಂದು ಸತಾಯಿಸಿದ್ದ.

ಹಾಸನದ ಖಾಸಗಿ ಆಸ್ಪತ್ರೆಯಲ್ಲಿ ಗುರುಮೂರ್ತಿ ಚಿಕಿತ್ಸೆ ಪಡೆಯುತ್ತಿದ್ದು, ಸಕಲೇಶಪುರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹಾಸನ ರಾಜಕೀಯ ವಿಚಾರ ಸ್ನೇಹಿತರಿಬ್ಬರ ನಡುವೆ ಜಗಳ ನಡೆದಿಟ್ಟಿದ್ದು , ಮಚ್ಚಿನಿಂದ ಸ್ನೇಹಿತರು ಹೊಡೆದಾಡುವಂತೆ ಮಾಡಿದೆ . ಇಲ್ಲಿನ ಸಕಲೇಶಪುರ ತಾಲೂಕಿನ ಹೊಸ್ಕವಳ್ಳಿ ಗ್ರಾಮದಲ್ಲಿ ರಮೇಶ್ ಎಂಬಾತ ತನ್ನ ಸ್ನೇಹಿತ ಗುರುಮೂರ್ತಿಗೆ ಮಚ್ಚಿನಿಂದ ಹಲ್ಲೆ ಮಾಡಿ ಎಡಗೈ ಕತ್ತರಿಸಿದ್ದಾನೆ. ಸ್ನೇಹಕ್ಕೆ ಇಷ್ಡೆ ನ ಬೆಲೆ ? ಇಲ್ಲ

ಬಂಧನ ವಿಳಂಬ: ಅಳಲು

ಸಣ್ಣ ಕಾರಣಕ್ಕೆ ಸ್ನೇಹಿತರಿಬ್ಬರ ನಡುವೆ ಶುರುವಾದ ಜಗಳದಲ್ಲಿ ಒಬ್ಬನ ಕೈ ಕಡಿದ ಆರೋಪಿಯನ್ನು ಇನ್ನೂ ಬಂಧಿಸಿಲ್ಲ ಎಂದು ಗಾಯಾಳು ಗುರುಮೂರ್ತಿ ಅಳಲು ತೋಡಿಕೊಂಡಿದ್ದಾರೆ. , ಹಾಸನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಅವರು, ಹೊನ್ನವಳ್ಳಿ ಕೊಪ್ಪಲು ಗ್ರಾಮದ ರಮೇಶ್, ಮಚ್ಚಿನಿಂದ ಕೈ ಕತ್ತರಿಸಿರುವ ಬಗ್ಗೆ ಸಕಲೇಶಪುರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈವರೆಗೂ ಆರೋಪಿಯನ್ನು ಬಂಧಿಸಿಲ್ಲ ಎಂದು ಗುರುಮೂರ್ತಿ ಆರೋಪಿಸಿದ್ದಾರೆ. , ಶನಿವಾರ ರಾತ್ರಿ 8.30 ಸಮಯದಲ್ಲಿ ಬಾಳುಪೇಟೆಯ ಜೆಪಿ ನಗರದಲ್ಲಿ, ತನ್ನ ಬಳಿ ರಮೇಶ್ 85 ಸಾವಿರ ಹಣ ಸಾಲ ಪಡೆದಿದ್ದ. ಅದನ್ನು ವಾಪಸ್ ಕೊಡುವಂತೆ ಗುರುಮೂರ್ತಿ ಕೇಳಿದ್ದಾನೆ. , ಬಳಿಕ ಇಬ್ಬರ ನಡುವೆ

ರಾಜಕೀಯ ಚರ್ಚೆ ಶುರುವಾಗಿ ಬಿಜೆಪಿ ಕಾರ್ಯಕರ್ತನಾಗಿರುವ ಗುರುಮೂರ್ತಿ ನಮ್ಮ ಎಂದರೆ, ಅಭ್ಯರ್ಥಿ ಗೆಲ್ಲುತ್ತಾರೆ ಜೆಡಿಎಸ್‌ ಬೆಂಬಲಿಗನಾಗಿರುವ ರಮೇಶ್ ಇಲ್ಲ ಜೆಡಿಎಸ್‌ ಅಭ್ಯರ್ಥಿ ಗೆಲ್ಲುತ್ತಾರೆ ಎಂದ. ಇಷ್ಟಕ್ಕೇ ಜಗಳ ಶುರುವಾಗಿ ರಮೇಶ, ಗುರುಮೂರ್ತಿ ಕೈ ಕತ್ತರಿಸಿದ್ದಾನೆ. ಈ ಘಟನೆ ಬಗ್ಗೆ ಪ್ರತಿಕ್ರಿಯಿಸಿರುವ ಸ್ಥಳೀಯ ಶಾಸಕ ಎಚ್‌.ಕೆ.ಕುಮಾರಸ್ವಾಮಿ, ಇದು ರಾಜಕೀಯ ಹಿನ್ನೆಲೆ ನಡೆದಿರುವ ಜಗಳ ಅಲ್ಲ ಎಂದು ಸ್ಪಷ್ಟಪಡಿಸಿದರು.