ಕೇಂದ್ರ ಸರ್ಕಾರದ ಈ ಹೊಸ ಯೋಜನೆ ಬಂದರೆ ಶಾಂತಿಗ್ರಾಮ ಅಥವಾ ಹಿರಿಸಾವೆ ಟೋಲ್ ಗಳಲ್ಲಿ ಉಳಿಯೋದು ಒಂದೇ

0

ಹಾಸನವನ್ನು ಬೆಂಗಳೂರಿನೊಂದಿಗೆ ಜೋಡಿಸುವ NH75ರಲ್ಲಿನ ಶಾಂತಿಗ್ರಾಮ ಮತ್ತು ಹಿರಿಸಾವೆ 2 ಟೋಲ್‌ಗಳ ನಡುವಿನ ಅಂತರ ಕೇವಲ 45KM ಹಾಗಾದರೆ ಕೇಂದ್ರ ಸಾರಿಗೆ ಸಚಿವ ಗಡ್ಕರಿ ಮಾತಿ​ನಂತೆ ಕೇಂದ್ರ ಸರ್ಕಾರ ಕ್ರಮಕ್ಕೆ ಮುಂದಾ​ದರೆ ಇವು​ಗಳಲ್ಲಿ ಒಂದು ಟೋಲ್‌​ ವಿಲೀನ ಅಥವಾ ಒಂದು ಟೋಲ್ ಮುಚ್ಚುವ ನಿರೀ​ಕ್ಷೆ​ಗ​ಳಿ​ವೆ.

ರಾಷ್ಟ್ರೀಯ ಹೆದ್ದಾರಿಗಳಲ್ಲಿ 60KM ಅಂತರದೊಳಗಿರುವ ಹೆಚ್ಚುವರಿ ಟೋಲ್‌ಗಳನ್ನು(Toll) ಮುಂದಿನ ಮೂರು ತಿಂಗಳೊಳಗಾಗಿ ಮುಚ್ಚಲಾ​ಗು​ವು​ದೆಂಬ ಕೇಂದ್ರ ಸಾರಿಗೆ ಸಚಿವ ನಿತಿನ್‌ ಗಡ್ಕರಿ(Nitin Gadkari) ಹೇಳಿಕೆ ಕಾರ್ಯ​ರೂ​ಪಕ್ಕೆ ಬಂದರೆ, ಹಾಸನದಲ್ಲಿ 2 ರಾಜ್ಯದ ಒಳಗೆ 28 ಟೋಲ್‌​ಗೇ​ಟ್‌​ಗಳು ಸ್ಥಗಿ​ತ ಅಥವಾ ವಿಲೀ​ನ​ಗೊ​ಳ್ಳುವ ಸಾಧ್ಯತೆಗಳಿ​ವೆ.

ಮಂಗಳೂರಿನ ಸುರ​ತ್ಕಲ್‌ ಟೋಲ್‌ ಸ್ಥಗಿ​ತ ಖಚಿ​ತ ಎನ್ನಲಾಗಿದೆ (ತಲಪಾಡಿ ಹಾಗೂ ಸುರತ್ಕಲ್‌ ನಡುವೆ ಇರುವ ಅಂತರ 35KM, ಸುರತ್ಕಲ್‌ ಮತ್ತು ಹೆಜಮಾಡಿ ನಡುವೆ 18KM, ಇನ್ನು ಬ್ರಹ್ಮರಕೂಟ್ಲು ಹಾಗೂ ಸುರತ್ಕಲ್‌ ನಡುವಿನ ಅಂತ​ರ 32KM ಉಡುಪಿ ಜಿಲ್ಲೆಯ ಹೆಜಮಾಡಿ ಮತ್ತು ಸಾಸ್ತಾನ ಟೋಲ್‌ಗಳ ನಡುವಿನ ಅಂತರವೂ 55KM ) ಏಕೆಂದರೆ : ಇವುಗಳಲ್ಲಿ ಈಗಾಗಲೇ ಬ್ರಹ್ಮರಕೂಟ್ಲು, ಸುರತ್ಕಲ್‌ ಮುಕ್ಕದ ಟೋಲ್‌ಗೇಟ್‌ಗಳು ವಿವಾದಕ್ಕೊಳಗಾಗಿದ್ದು, ಇವುಗಳನ್ನು ರದ್ದುಪಡಿಸುವಂತೆ ಆಗ್ರಹಿಸಿ ನಾಗರಿಕರು ಪ್ರತಿಭಟನೆ ನಡೆಸಿದ್ದಾರೆ. ಇತ್ತೀ​ಚೆಗೆ ಮಂಗಳೂರಿಗೆ ಭೇಟಿ ನೀಡಿದ್ದ ಸಚಿವ ನಿತಿನ್‌ ಗಡ್ಕರಿ ಅವರು ಸುರತ್ಕಲ್‌ ಟೋಲ್‌ಗೇಟ್‌ ರದ್ದುಪಡಿಸುವ ಭರವಸೆ ನೀಡಿದ್ದು, ಹೀಗಾಗಿ ಈ ಟೋಲ್‌​ಗೇಟ್‌ ಬಂದ್‌ ಆಗು​ವುದು ಬಹು​ತೇಕ ಖಚಿ​ತ​ ಎನ್ನಬಹುದು

ಇನ್ನು ಹಿರಿಸಾವೆ ಬೆಳ್ಳೂರು ಕ್ರಾಸ್ ನಡುವೆ 18km ಮಾತ್ರ ., ಹಾಗಾದರೆ ಹಾಸನ – ಬೆಂಗಳೂರು ಮದ್ಯೆ ಬೆಳ್ಳೂರು – ಹಿರಿಸಾವೆ – ಶಾಂತಿ ಗ್ರಾಮ ಟೋಲ್ ಗಳಲ್ಲಿ ಯಾವುದೆ ಉಳಿಯಲಿದೆ , ಯಾವುದು ನೆನೆಪು ಮಾತ್ರ ಕಾದು ನೋಡಬೇಕಿದೆ .

LEAVE A REPLY

Please enter your comment!
Please enter your name here