Breaking News

ಶಿರಾಡಿ ಘಾಟಿಯಲ್ಲಿ ಏಕ ಮುಖ ಸಂಚಾರಕ್ಕೆ ಅನುವು , ರಸ್ತೆ ಯಾವುದು ಇಲ್ಲಿದೆ ವಿವರ

By

July 18, 2022

ಬೆಂಗಳೂರಿನಿಂದ ಮಂಗಳೂರಿಗೆ ಬರುವ ಕಾರು, ಜೀಪು, ಆ್ಯಂಬುಲೆನ್ಸ್, ಟೆಂಪೋ, ಮಿನಿ ವ್ಯಾನ್, ದ್ವಿಚಕ್ರ ವಾಹನಗಳು ಪ್ರತೀ ಗಂಟೆಗೆ 30 ಕಿ.ಮೀ. ವೇಗ ಮಿತಿಯಲ್ಲಿ ಸಕಲೇಶಪುರ, ಆನೆಮಹಲ್, ಕ್ಯಾನಹಳ್ಳಿ, ಚಿನ್ನಳ್ಳಿ, ಕಡಗರವಳ್ಳಿ, ಮಾರನಹಳ್ಳಿ ಮಾರ್ಗವಾಗಿ ಸಂಚರಿಸಬೇಕು. ಅದೇ ರೀತಿ ಮಂಗಳೂರಿನಿಂದ ಬೆಂಗಳೂರಿಗೆ ತೆರಳುವ ಈ ವಾಹನಗಳು ಪ್ರತೀ ಗಂಟೆಗೆ 30 ಕಿ.ಮೀ. ವೇಗ ಮಿತಿಯಲ್ಲಿ ಮಾರನಹಳ್ಳಿ, ಕಾಡುಮನೆ, ಹಾರ್ಲೆ, ಕೂಡಿಗೆ,ಆನೆಮಹಲ್, ಸಕಲೇಶಪುರ ಮಾರ್ಗವಾಗಿ ಸಂಚರಿಸಬೇಕು ಎಂದು ತಿಳಿಸಿದ್ದಾರೆ.

ರಾಷ್ಟ್ರೀಯ ಹೆದ್ದಾರಿ-75 ಶಿರಾಡಿಘಾಟ್ ರಸ್ತೆ.

ಬೆಂಗಳೂರಿನಿಂದ ಮಂಗಳೂರು ಹೋಗುವವರು ಸಕಲೇಶಪುರ>ಆನೆಮಹಲ್> ದೋಣಿಗಾಲ್>ಕ್ಯಾನಹಳ್ಳಿ>ಚಿನ್ನಳ್ಳಿ >ಹಿರಿದನಹಳ್ಳಿ ಕಡಗರವಳ್ಳಿ>ಮಾ ರನಹಳ್ಳಿ ಮುಖಾಂತರ ಹೋಗುವುದು.

ಮಂಗಳೂರಿನಿಂದ ಬೆಂಗಳೂರು ಹೋಗುವವರು ಗುಂಡ್ಯ>ಮಾರನಹಳ್ಳಿ>ಕಾಡುಮ ನೆ>ಗುರ್ಜೇನಹಳ್ಳಿ>ದೇಖಾ>ನಡ ಹಳ್ಳಿ>ಹಾರ್ಲೆಕೂಡಿಗೆ>ಆನೆಮಹಲ್ ಸಕಲೇಶಪುರ ಮುಖಾಂತರ ಹೋಗುವುದು.