Hassan

ಮಾನವೀಯತೆ ಮೆರೆದ ಆಟೋ ಚಾಲಕ ಬಾಬು : ಆರಕ್ಷಕರಿಂದ ಶ್ಲಾಘನೆ

By Hassan News

November 14, 2023

ಹಾಸನ : ಆಟೋ ಚಾಲಕ ಬಾಬು 30 ಗ್ರಾಂ ಚಿನ್ನವನ್ನು ನಗರ ಠಾಣೆಗೆ ನೀಡುವ ಮೂಲಕ ಮಾನವೀಯತೆ ಮೆರೆದಿದ್ದಾರೆಇಂದು ಹೇಮಾವತಿ ನಗರದಿಂದ ಹಾಸನ ನಗರ ಬಸ್ ನಿಲ್ದಾಣಕ್ಕೆ ಪ್ರಯಾಣಿಸುತ್ತಿರುವ ವೇಳೆ

ಈ ಘಟನೆ ನಡೆದಿದೆ.ವಿನುತಾ ಎಂಬ ಮಹಿಳೆ ಆಟೋದಲ್ಲಿ ತನ್ನ ಬ್ಯಾಗ್ ಪೋನ್ ಮರೆತು ಹೋಗಿದ್ದಾರೆತಕ್ಷಣ ಹಾಸನ ನಗರ ಠಾಣೆಗೆ ದೂರು ನೀಡಲು ಹೋದಾಗ ವಿನುತಾ ಅವರ ದೂರವಾಣಿ ಸಂಖ್ಯೆಗೆ ಪೋಲಿಸರು ಕರೆ ಮಾಡಿದಾಗ ಆಟೋ ಚಾಲಕ ಬಾಬುರವರು ಕರೆ ಸ್ವೀಕರಿಸಿ ಬ್ಯಾಗ್ ನನ್ನ ಹತ್ತಿರಾನೇ

ಇದೆ ಎಂದು ನಗರ ಠಾಣೆಗೆ ಬಂದು ಹಸ್ತಾಂತರಿಸಿದರುಬಾಬು ರವರ ಕಾರ್ಯಕ್ಕೆ ಹಾಸನ ನಗರ ಠಾಣೆಯ ಸಿಬ್ಬಂದಿ ವರ್ಗದವರು ಅಭಿನಂದಿಸಿದರು.ಬ್ಯಾಗ್ ಹಾಗೂ ಚಿನ್ನಾಭರಣಗಳನ್ನು ಪಡೆದುಕೊಂಡ ವಿನುತಾ ಆಟೋ ಚಾಲಕ ಬಾಬು ಹಾಗೂ ಠಾಣೆಯ ಸಿಬ್ಬಂದಿ ವರ್ಗದವರಿಗೆ ಧನ್ಯವಾದಗಳನ್ನು ತಿಳಿಸಿದರುಇ ವೇಳೆ ನಗರ ಕ್ರೈಂ ವಿಭಾಗದ ಇನ್ಸ್ಪೆಕ್ಟರ್

ಆನಂದ್. ಎ ಎಸ್ ಐ ವೆಂಕಟೇಶ್ .ಸೂರಜ್.ಠಾಣೆಯ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು