![](https://hassananews.com/wp-content/uploads/2023/09/WhatsApp-Image-2023-09-06-at-10.58.22-AM-1024x461.jpg)
ಹಾಸನ : ವಿದ್ಯುತ್ ತಗುಲಿ ವ್ಯಕ್ತಿಯೊಬ್ಬರು ಸಾವನ್ನಪ್ಪಿರುವ ಘಟನೆ ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲ್ಲೂಕಿನ ಶ್ರವಣಬೆಳಗೊಳ ಹೋಬಳಿಯ ಚಲ್ಯ ಗ್ರಾಮದಲ್ಲಿ ಸೋಮವಾರ ರಾತ್ರಿ ನಡೆದಿದೆ. ನಾಗರಾಜು- ಸಾವಿತ್ರಮ್ಮ ಎಂಬುವವರ ಪುತ್ರ ಶೇಖರ್ (35 ) ಮೃತ ದುರ್ದೈವಿ. ಆಟೋ ಚಾಲಕನಾಗಿದ್ದ ಶೇಖರ್, ಸೋಮವಾರ ರಾತ್ರಿ 7 ಗಂಟೆ ಸಮಯದಲ್ಲಿ ತಮ್ಮ ಮನೆಯ ಹಿಂಭಾಗದ ಕೊಟ್ಟಿಗೆಗೆ ಜಾನುವಾರುಗಳನ್ನು ಕಟ್ಟಲು ಹೋದಾಗ ವಿದ್ಯುತ್ ಸ್ವಿಚ್ ಮುಟ್ಟಿದ ತಕ್ಷಣ ಶಾಕ್ ತಗುಲಿ ನೆಲಕ್ಕೆ ಬಿದ್ದಿದ್ದಾರೆ. ತಕ್ಷಣ ಅವರನ್ನು ಶ್ರವಣಬೆಳಗೊಳ ಸಮುದಾಯ ಆರೋಗ್ಯ ಕೇಂದ್ರಕ್ಕೆ ಚಿಕಿತ್ಸೆಗೆ ಕರೆದುಕೊಂಡು ಬರಲಾಯಿತು. ವೈದ್ಯರು ಪರೀಕ್ಷಿಸಿ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ. ಶ್ರವಣಬೆಳಗೊಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
![](https://hassananews.com/wp-content/uploads/2023/09/WhatsApp-Image-2023-09-06-at-10.58.20-AM-1-1024x461.jpg)
![](https://hassananews.com/wp-content/uploads/2023/09/WhatsApp-Image-2023-09-06-at-10.58.48-AM.jpeg)
![](https://hassananews.com/wp-content/uploads/2023/09/WhatsApp-Image-2023-09-06-at-10.58.23-AM-2-461x1024.jpg)