ಕಳೆದ ರಾತ್ರಿ ( 29Aug2023 ) 9.45 ರ ಸುಮಾರು, ಹಾಸನ ಜಿಲ್ಲೆಯ ಬೇಲೂರು ರಸ್ತೆಯ ಸಂಕೇನಹಳ್ಳಿಯಲ್ಲಿ ನಡೆದ ಘಟನೆ ಇದಾಗಿದ್ದು, ಪ್ರಯಾಣಿಕರ ಹತ್ತಿಸಲು ಸಂಕೇನಹಳ್ಳಿ ಬಳಿ ನಿಲ್ಲಿಸಿದ್ದ ಸಾರಿಗೆ ಬಸ್ ಒಂದಕ್ಕೆ ಹಿಂಬದಿಯಿಂದ ಬಂದ ಪ್ಲೈವುಡ್ ತುಂಬಿದ್ದ ಲಾರಿ (ಚಿಕ್ಕಮಗಳೂರಿನಿಂದ ಬೆಂಗಳೂರಿಗೆ ಹೊರಟಿದ್ದ ಲಾರಿ) ಬಂದು ಗುದ್ದಿದೆ
![](https://hassananews.com/wp-content/uploads/2023/08/WhatsApp-Image-2023-08-30-at-9.54.46-AM-1-461x1024.jpeg)
ಗುದ್ದಿದ ಪರಿಣಾಮ ಕೆಲವೇ ಕ್ಷಣದಲ್ಲಿ ಮತ್ತೊಂದು ಲಾರಿ ಆ ಪ್ಲೈವುಡ್ ತುಂಬಿದ ಲಾರಿಗೆ ಗುದ್ದಿದೆ. ರಸ್ತೆ ಪಕ್ಕದಲ್ಲಿ ನಿಂತಿದ್ದ ಆ ಬಸ್ ಮನೆ ಪಕ್ಕದಲ್ಲಿ ನಿಂತಿದ್ದ ಕಾರಿಗೆ ಹಾಗೂ ಕಾರಿನ ಮುಂಭಾಗದಲ್ಲಿದ್ದ ಟ್ರಾಕ್ಟರ್ ಗು ಕೂಡ ಬಡಿದಿದೆ, ಅದೃಷ್ಟ ವಶಾತ್ ಈ ಸರಣಿ ಅಪಘಾತದಲ್ಲಿ ಒಟ್ಟು 5 ವಾಹನ ಜಖಂ ಗೊಂಡಿದ್ದು ಐವರಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು, ಗಾಯಗೊಂಡವರ ಹಾಸನ ಜಿಲ್ಲಾಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗೆ ಒಳಪಡಿಸಿದೆ
![](https://hassananews.com/wp-content/uploads/2023/08/WhatsApp-Image-2023-08-30-at-9.54.45-AM-768x1024.jpeg)
ಯಾವುದೇ ಪ್ರಾಣಾಪಾಯ ಇಲ್ಲ, ಚಿಕ್ಕಮಗಳೂರಿನಿಂದ – ಬೆಂಗಳೂರಿಗೆ ಹೊರಟಿದ್ದ ಕಡೂರು ಡಿಪೋಗೆ ಸೇರಿದ ಎಸ್.ಆರ್.ಟಿ.ಸಿ ಬಸ್ ಇದಾಗಿದ್ದು. ಬಸ್ ಅಲ್ಪ ನುಜ್ಜು ಗುಜ್ಜಾಗಿದ್ದು. ಮನೆಯ ಮಾಲೀಕ ಚೇತನ್ ಎಸ್ ಪಿ ಆತಂಕಗೊಂಡಿದ್ದಾರೆ. ಘಟನೆಗೆ ಮತ್ತಷ್ಟು ಕಾರಣ ತಿಳಿಯಬೇಕಿದೆ .
![](https://hassananews.com/wp-content/uploads/2023/08/WhatsApp-Image-2023-08-30-at-9.54.45-AM-1-768x1024.jpeg)
![](https://hassananews.com/wp-content/uploads/2023/08/IMG-20230830-WA0042-1024x768.jpg)
![](https://hassananews.com/wp-content/uploads/2023/08/IMG-20230830-WA0037-461x1024.jpg)