ಹಾಸನ : ಮಾನ್ಯ ಪ್ರಧಾನಮಂತ್ರಿಗಳಾದ ಶ್ರೀ ನರೇಂದ್ರ ಮೋದಿಯವರ 70 ನೇ ಹುಟ್ಟು ಹಬ್ಬದ ಅಂಗವಾಗಿ ಹಾಸನ ಕ್ಷೇತ್ರ ಶಾಸಕರಾದ ಪ್ರೀತಂ ಗೌಡ ಅವರ ನೇತೃತ್ವದಲ್ಲಿ ಹಾಸನ ನಗರ ಮಂಡಲದ ವತಿಯಿಂದ ರಕ್ತದಾನ ಶಿಬಿರ ಆಯೋಜಿಸಿ ರಕ್ತದಾನ ಮಾಡಲಾಯಿತು,
ಈ ಸಂಧರ್ಭದಲ್ಲಿ ಕಾರ್ಯಕರ್ತರು ರಕ್ತದಾನ ಮಾಡಿದರು.ಶಿಬಿರವನ್ನು ನಗರಾದ್ಯಕ್ಷರಾದ ವೇಣುಗೋಪಾಲ್ ಜಿಲ್ಲಾ ಮಹಿಳಾ ಮೋರ್ಚ ಅದ್ಯಕ್ಷರಾದ ಶ್ರೀಮತಿ ರತ್ನ ಪ್ರಕಾಶ,ನಗರ ಮಹಿಳಾ ಮೋರ್ಚ ಅಧ್ಯಕ್ಷರಾದ ಶ್ರೀಮತಿ ಅನಿತಾ ರುಕೇಶ್ ಹಾಗು ವೇದಿಕೆ ಮೇಲಿದ್ದ ಗಣ್ಯರು ಉದ್ಘಾಟನೆ ಮಾಡಿದರು.ಈ ಸಂದರ್ಭದಲ್ಲಿ ನಗರ ಮಂಡಲ ಸಮಿತಿ ಪಧಾದಿಕಾರಿಗಳು ಮುಖಂಡರು ಕಾರ್ಯಕರ್ತರು ಉಪಸ್ಥಿತರಿದ್ದರು . @narendramodi @narendramodijiindia
![](https://hassananews.com/wp-content/uploads/2020/09/fb_img_16004227835746267177656861135803-1.jpg)