ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ

0

66/11ಕೆ.ವಿ ಶಾಂತಿಗ್ರಾಮ ಮತ್ತು ಮೊಸಳೆಹೊಸಹಳ್ಳಿ ವಿದ್ಯುತ್ ವಿತರಣ ಕೇಂದ್ರದಲ್ಲಿ ತುರ್ತು ನಿರ್ವಹಣಾ ಕೆಲಸವನ್ನು ಹಮ್ಮಿಕೊಂಡಿರುವುದರಿಂದ, 66/11ಕೆ.ವಿ ಶಾಂತಿಗ್ರಾಮ ವಿದ್ಯುತ್ ವಿತರಣ ಕೇಂದ್ರದಿಂದ ವಿದ್ಯುತ್ ಸರಬರಾಜಾಗುವ ಮೆಲ್ಲಹಳ್ಳಿ, ಮರ್ಕುಲಿ, ಕೆಂಚಟಹಳ್ಳಿ, ಯೋಗಿಹಳ್ಳಿ, ಗಾಡೇನಹಳ್ಳಿ ಹಂಪನಹಳ್ಳಿ, ಸಾರಾಪುರ, ಕಾರೆಕೆರೆ, ಪಿಜಿಸಿಐಎಲ್. ನಾಗೇನಹಳ್ಳಿ, ದೇವಿಹಳ್ಳಿ, ಹೆಗಡೆಹಳ್ಳಿ, ಮಡೇನೂರು ಮತ್ತು ಕೃಷಿ ಕಾಲೇಜು ಹಾಗೂ ಮೊಸಳೆಹೊಸಹಳ್ಳಿ ವಿದ್ಯುತ್ ವಿತರಣ ಕೇಂದ್ರದಿಂದ ವಿದ್ಯುತ್ ಸರಬರಾಜಾಗುವ ಮಾದಾಪುರ, ಮೊಸಳೆಹೊಸಹಳ್ಳಿ, ಬನವಾಸೆ, ಮುತ್ತಿಗೆಹಿರೇಹಳ್ಳಿ, ಕಿತ್ತಾನೆ, ಮಾರೇನಹಳ್ಳಿ, ಬಸ್ತಿಹಳ್ಳಿ ಮತ್ತು ಸುತ್ತಮುತ್ತಲ ವಿದ್ಯುತ್ ಸ್ಥಾವರಗಳಿಗೆ ಡಿ. 08 ರಂದು ಬೆಳಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆ ಯವರೆಗೆ ವಿದ್ಯುತ್ ಸರಬರಾಜು ಇರುವುದಿಲ್ಲ. ಆ ಸಮಯದಲ್ಲಿ ಎಲ್ಲಾ ಸಾರ್ವಜನಿಕರು ನಿಗಮದೊಂದಿಗೆ ಸಹಕರಿಸುವಂತೆ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತದ ಹಾಸನ ಟಿ.ಎಲ್ ಮತ್ತು ಎಸ್.ಎಸ್ ವಿಭಾಗದ ಕಾರ್ಯನಿರ್ವಾಹಕ ಇಂಜಿನಿಯರ್ ಮನವಿ ಮಾಡಿದ್ದಾರೆ.

LEAVE A REPLY

Please enter your comment!
Please enter your name here