ಹಾಸನ ಜ.12(ಕರ್ನಾಟಕ ವಾರ್ತೆ): ನಗರದ ರಾಜೀವ್ ತಾಂತ್ರಿಕ ಮಹಾವಿದ್ಯಾಲಯದ ಎಲೆಕ್ಟ್ರಾನಿಕ್ ಮತ್ತು ಸಂಹವನ ಎಂಜಿನಿಯರಿಂಗ್ ವಿಭಾಗದ ಸಹಾಯಕ ಪ್ರಾಧ್ಯಾಪಕ ಹೆಚ್. ಕೆ. ರವಿಕಿರಣ್ ಅವರು Development of Compression and Reconstruction Algorithm for Progressive transmission of medical images ಎಂಬ ವಿಷಯ ಕುರಿತು ಮಂಡಿಸಿದ ಮಹಾ ಪ್ರಬಂದಕ್ಕೆ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವ ವಿದ್ಯಾಲಯವು ಪಿ. ಹೆಚ್. ಡಿ. ಪದವಿ ನೀಡಿದೆ.
ಹೆಚ್.ಕೆ. ರವಿಕಿರಣ್ ಅವರು ಮೈಸೂರಿನ ಎಲೆಕ್ಟ್ರಾನಿಕ್ಸ್ ಮತ್ತು ಸಂವಹನ ಇಂಜಿನಿಯರಿಂಗ್ ವಿಭಾಗದ (GSSSIETW) ಸಹ ಪ್ರಾಧ್ಯಾಪಕರಾದ ಡಾ. ಜಯಂತ್ ಜೆ ಅವರ ಮಾರ್ಗದರ್ಶನದಲ್ಲಿ ಸಂಶೋಧನೆ ಕೈಗೊಂಡು ಮಹಾ ಪ್ರಬಂದವನ್ನು ಸಿದ್ಧಪಡಿಸಿದರು.
ಹೆಚ್. ಕೆ. ರವಿಕಿರಣ್ ಅವರು ನಗರದ ನಿವಾಸಿ ಯಶೋಧ ಮತ್ತು ಹೆಚ್. ಬಿ. ಕೃಷ್ಣಪ್ಪನವರ ಪುತ್ರ.