KSRTC ಬಸ್‌ನಲ್ಲಿ ಶಾಲೆಗೆ ತೆರಳುತ್ತಿದ್ದ ಸಮಯದಲ್ಲಿ ಹೃದಯಾಘಾತವಾಗಿ ಶಿಕ್ಷಕಿ ಸಾವು

0

ಹಾಸನ / ಅರಕಲಗೂಡು: ಹಾಸನ ಜಿಲ್ಲೆಯ ಅರಕಲಗೂಡು ತಾಲ್ಲೂಕಿನ ಪಟ್ಟಣದಲ್ಲಿ KSRTC ಬಸ್‌ನಲ್ಲಿ ಶಾಲೆಗೆ ತೆರಳುತ್ತಿದ್ದ ಸಮಯದಲ್ಲಿ ಹೃದಯಾಘಾತವಾಗಿ ಶಿಕ್ಷಕಿ ವಿಮಲಾ (52) ಮೃತಪಟ್ಟ ದುರ್ಗಟನೆ ನಡೆದಿದೆ . ತಾಲ್ಲೂಕಿನ ಕಬ್ಬಳಿಗೆರೆ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕಿಯಾಗಿದ್ದ ಇವರು ಕಳೆದ ಮಂಗಳವಾರ(30Nov2021) ಬೆಳಿಗ್ಗೆ ಶಾಲೆಗೆ ಹೋಗಲು ಇಲ್ಲಿಯ ನಿಲ್ದಾಣದಲ್ಲಿ ಬಸ್ ಹತ್ತಿದ್ದಾರೆ , ಈ ಸಂದರ್ಭದಲ್ಲಿ ನೋಡಲು ಆರೋಗ್ಯವಾಗಿದ್ದಾರೆ ಎಂದು ಕಂಡರು. ಸೀಟಿನಲ್ಲಿ ಕುಳಿತ್ತಿದ್ದ ಕೆಲವೇ ನಿಮಿಷದಲ್ಲಿ ಅವರಿಗೆ ಹೃದಯಾಘಾತವಾಗಿದೆ. ಟಿಕೆಟ್ ನೀಡಲು ನಿರ್ವಾಹಕರು ಬಂದು ನೋಡಿದಾಗ ಮೃತಪಟ್ಟಿರುವುದು ಗೊತ್ತಾಗಿದೆ. ತಕ್ಷಣ ಅಲ್ಲಿಂದ ಬಸ್‌ನಲ್ಲೇ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ದುರಾದೃಷ್ಟವಶಾತ್ ಸಾವನ್ನಪ್ಪಿರುವು ವೈದ್ಯರು ಹೇಳಿದ್ದಾರೆ. ನಂತರ,

ಶಿಕ್ಷಕರ ಭವನದಲ್ಲಿ ಕೆಲಕಾಲ ಮೃತ ದೇಹವನ್ನು ಇರಿಸಿ ಅಂತಿಮ ನಮನ ಸಲ್ಲಿಸಿ. ಅನಂತರ ಸಂಬಂಧಿಗಳ ಮೂಲಕ ಅವರ ಸ್ವಂತ ಊರು ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿಗೆ ಕಳಿಸಿಕೊಡಲಾಯಿತು. ಪತಿ SBI ನಿವೃತ್ತ ನೌಕರ ಸುಂದರ್ ನಾಯಕ್ ಪುತ್ತೂರಿನಲ್ಲಿ ವಾಸವಾಗಿದ್ದು ., ಅಂತಿಮ ವಿಧಿ ವಿಧಾನ ನೆರವೇರಿಸಿದ್ದಾರೆ.

LEAVE A REPLY

Please enter your comment!
Please enter your name here