ಮನೆಯ ಹಿಂಭಾಗದಲ್ಲಿ ಶವ ಹೂತು ಹಾಕಲಾಗಿತ್ತು

0

ಹಾಸನ/ಅರಕಲಗೂಡು : ಕೃಷ್ಣೇಗೌಡ ಕಾಣದಿದ್ದನ್ನು ಗಮನಿಸಿದ ಗ್ರಾಮಸ್ಥರು ಸಂಶಯ ವ್ಯಕ್ತಪಡಿಸಿ ವಿಚಾರಿಸಿದ್ದರು. ಆದರೆ, ಲೀಲಾವತಿ ಸರಿಯಾಗಿ ಉತ್ತರಿಸಿರಲಿಲ್ಲ. ಮನೆಯ ಹಿಂಭಾಗ ನೆಲವನ್ನು ಅಗೆದು ಮುಚ್ಚಿರುವುದನ್ನು ಕಂಡು

ಅನುಮಾನಗೊಂಡ ಜನರು, ಲೀಲಾವತಿಯೇ, ಕೃಷ್ಣೇಗೌಡರನ್ನು ಹತ್ಯೆ ಮಾಡಿ ಹೂತು ಹಾಕಿರಬಹುದು ಶಂಕೆ ವ್ಯಕ್ತಪಡಿಸಿದ್ದರು. ಈ ಬಗ್ಗೆ ಕೃಷ್ಣ ಶೆಟ್ಟಿ ಎಂಬುವವರು ಪೋಲೀಸರಿಗೆ ದೂರು ನೀಡಿದ್ದರು. ಈ ದೂರನ್ನು ಆಧರಿಸಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ನಡೆಸುತ್ತಿದ್ದು ., ತಾಲ್ಲೂಕಿನ ನೇರಲಹಳ್ಳಿಯಲ್ಲಿ ಸೋಮವಾರ ರಾತ್ರಿ

ಹೆಂಡತಿಯೇ ಗಂಡನನ್ನು ಕೊಲೆ ಮಾಡಿ ಮನೆಯ ಹಿಂಭಾಗದಲ್ಲಿ ಹೂತು ಹಾಕಿದ್ದಾರೆ ಎನ್ನಲಾಗಿದೆ .,  ಕೃಷ್ಣೇಗೌಡ (50) ಕೊಲೆಯಾದ ವ್ಯಕ್ತಿ. ಈತನಿಗೆ ಕುಡಿತದ ಚಟವಿದ್ದು, ಇದೇ ವಿಚಾರವಾಗಿ ಗಂಡ– ಹೆಂಡತಿ ನಡುವೆ ನಿತ್ಯ ಜಗಳ ನಡೆಯುತ್ತಿತ್ತು ಎನ್ನಲಾಗಿದೆ. ಎರಡು ತಿಂಗಳ ಹಿಂದೆ

ಮನೆಯಲ್ಲಿದ್ದ ಒಡವೆಯನ್ನು ಮಾರಾಟ ಮಾಡಿ ಹಣವನ್ನು ಕುಡಿಯಲು ಬಳಸಿದ್ದ ವಿಚಾರವಾಗಿ ಸೋಮವಾರ ತಡರಾತ್ರಿವರೆಗೂ ಜಗಳ ನಡೆದಿತ್ತು ಎನ್ನಲಾಗಿದೆ .

LEAVE A REPLY

Please enter your comment!
Please enter your name here