![](https://hassananews.com/wp-content/uploads/2023/09/b4f3be3d-d20c-4fe1-94b4-8ad29004ffa3.jpeg)
ಹಾಸನ : ರಾಜ್ಯದ ವಿವಿಧ ಉಪ ವಿಭಾಗ ಹಾಗೂ ವೃತ್ತಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ 19 ಮಂದಿ ಡಿವೈಎಸ್ಪಿ ಹಾಗೂ 192 ಮಂದಿ ಇನ್ಸ್ಪೆಕ್ಟರ್ಗಳನ್ನು ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ಈ ಹಿಂದೆ ಹಾಸನ ಉಪ ವಿಭಾಗದ ಡಿವೈಎಸ್ಪಿಯಾಗಿ ಎರಡು ಬಾರಿ ವರ್ಗಾವಣೆಗೊಂಡಿದ್ದ ಉದಯಭಾಸ್ಕರ್ ಜಿ.ವಿ. ಅವರು ಮತ್ತೆ ಜಿಲ್ಲೆಗೆ ಬಂದಿದ್ದು, ಹೊಳೆನರಸೀಪುರ ಉಪ ವಿಭಾಗದ ಡಿವೈಎಸ್ಪಿಯಾಗಿ ನಿಯೋಜನೆಗೊಂಡಿದ್ದಾರೆ. ಈ ಹಿಂದೆ ಹಾಸನ ಡಿವೈಎಸ್ಪಿಯಾಗಿದ್ದ ಉದಯಭಾಸ್ಕರ್ ಅವರ ಕಾರ್ಯವೈಖರಿ ವಿರುದ್ಧ ಮಾಜಿ ಸಚಿವ ಎಚ್.ಡಿ. ರೇವಣ್ಣ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದರು , ಈ ಹಿನ್ನೆಲೆಯಲ್ಲಿ ವಿಜಯ ಭಾಸ್ಕರ್ ಅವರನ್ನು ಬೆಂಗಳೂರಿನ ಪ್ರಧಾನ ಕಚೇರಿಗೆ ಕರೆಸಿಕೊಳ್ಳಲಾಗಿತ್ತು. ಇದೀಗ ಪ್ರಧಾನ ಕಚೇರಿಯಲ್ಲಿದ್ದವರನ್ನು
ಹೊಳೆನರಸೀಪುರಕ್ಕೆ ನಿಯೋಜನೆ ಮಾಡಲಾಗಿದೆ. ಹಾಗೆಯೇ ಸಕಲೇಶಪುರ ಉಪ ವಿಭಾಗಕ್ಕೆ ಕರ್ನಾಟಕ ಕುಮಾರ್ ಲೋಕಾಯುಕ್ತದಲ್ಲಿದ್ದ ಪ್ರಮೋದ್ ಅವರನ್ನು ನೇಮಕ ಮಾಡಲಾಗಿದೆ.
- ಹಲವು ಇನ್ಸ್ಪೆಕ್ಟರ್ ವರ್ಗ:
ಹಾಗೆಯೇ ಜಿಲ್ಲೆಯ ವಿವಿಧೆಡೆ ಕರ್ತವ್ಯ ನಿರ್ವಹಿಸುತ್ತಿದ್ದ ಇನ್ಸ್ ಪೆಕ್ಟರ್ಗಳನ್ನು ವರ್ಗಾವರ್ಗಿ ಮಾಡಲಾಗಿದೆ. ಸ್ಥಳ ನಿರೀಕ್ಷೆಯಲ್ಲಿದ್ದ ಮೋಹನ್ ಕೃಷ್ಣ ಪಿ. ಅವರನ್ನು ಹಾಸನ ನಗರ ಪೊಲೀಸ್ ಠಾಣೆಗೆ ವರ್ಗ ಮಾಡಲಾಗಿದೆ , ಇಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ರೇವಣ್ಣ ಅವರನ್ನು ಕರ್ನಾಟಕ ಲೋಕಾಯುಕ್ತಕ್ಕೆ ನಿಯೋಜನೆ ಮಾಡಲಾಗಿದೆ. ಕರ್ನಾಟಕ ಲೋಕಾಯುಕ್ತದಲ್ಲಿದ್ದ ಲಕ್ಕಪ್ಪ ಆರ್ .ಮಸಗುಪ್ಪಿ ಅವರು ಅರಕಲಗೂಡು ವೃತ್ತಕ್ಕೆ ಬಂದಿದ್ದರೆ, ಇಲ್ಲಿದ್ದ ರಘುಪತಿ ಎಸ್. ಎಂ. ಅವರನ್ನು ರಾಜ್ಯ ಗುಪ್ತವಾರ್ತೆಗೆ ವರ್ಗ ಮಾಡಲಾಗಿದೆ.
![](https://hassananews.com/wp-content/uploads/2023/09/frame-15-1024x1024.jpg)
ಚಿಕ್ಕಮಗಳೂರು ನಗರ ಠಾಣೆಯಲ್ಲಿದ್ದ ಜಯರಾಂ ಎಸ್.ಎನ್. ಅವರನ್ನು ಹಳೇಬೀಳು ವೃತ್ತಕ್ಕೆ ವರ್ಗ ಮಾಡಿದ್ದರೆ, ಇಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಶ್ರೀಕಾಂತ್ ಅವರು ಕರ್ನಾಟಕ ಲೋಕಾಯುಕ್ತಕ್ಕೆ ವರ್ಗವಾಗಿದ್ದಾರೆ. ಮದ್ದೂರು ಪೊಲೀಸ್ ಠಾಣೆಯಲ್ಲಿದ್ದ ಸಂತೋಷ್ ಎಸ್. ಅವರು ಹಿರೀಸಾವೆ ವೃತ್ತಕ್ಕೆ ನಿಯೋಜನೆಗೊಂಡಿದ್ದಾರೆ