ಮಗಳ ಸಾವಿನ ಸುದ್ದಿ ಕೇಳಿದ ಕೆಲವೇ ವೇಳೆಯಲ್ಲಿ ತಾಯಿಯೂ ಸಾವನ್ನಪ್ಪಿರುವ ಘಟನೆ ಹಾಸನದ ದಾಸರಕೊಪ್ಪಲಿನಲ್ಲಿ

0

ಹಾಸನ : ಮಗಳ ಸಾವಿನ ಸುದ್ದಿ ಕೇಳಿ ಅಘಾತದಿಂದ ತಾಯಿಯೂ ಸಾವನ್ನಪ್ಪಿರುವ ಘಟನೆ ಹಾಸನ ನಗರದ ಹೊರವಲಯದ ದಾಸರಕೊಪ್ಪಲಿನಲ್ಲಿ ನಡೆದಿದೆ. ಮಗಳು ಲಲಿತಾ (55) ಮೃತಳಾದರು , ಇವರ ತಾಯಿ (75) ಲಲಿತಾ ಕೂಡ ಸಾವನ್ನಪ್ಪಿದರು ,  ಲಲಿತಾ ಹಾಗೂ ಪತಿ ನಾಗರಾಜ ದಾಸರಕೊಪ್ಪಲು ಬಡಾವಣೆಯಲ್ಲಿ ವಾಸವಿದ್ದು, ಕೆಳಭಾಗದ ನೆಲ ಮಹಡಿಯಲ್ಲಿ ವಾಸವಾಗಿದ್ದ ಲಲಿತಾ, ನಾಗರಾಜ ಮೇಲ್ಭಾಗದ ಮನೆಯನ್ನು ಭೋಗ್ಯಕ್ಕೆ ನೀಡಿದ್ದರು. ಎರಡು ವರ್ಷದ ಹಿಂದೆ

ಉದ್ದೂರು ಕೊಪ್ಪಲು ಗ್ರಾಮದ ಸುಧಾರಾಣಿ-ನಟರಾಜ ದಂಪತಿಗೆ ಐದು ಲಕ್ಷ ರೂ ಹಣ ಪಡೆದು ಮೂರು ವರ್ಷದ ಅವಧಿಗೆ ಭೋಗ್ಯಕ್ಕೆ ನೀಡಿದ್ದರು. ಭೋಗ್ಯಕ್ಕೆ ಬಂದ ಒಂದು ವರ್ಷದ ನಂತರ
ಸುಧಾರಣಿ-ನಟರಾಜ ದಂಪತಿ ವಿನಾಃ ಕಾರಣ ಲಲಿತಾ ಅವರೊಂದಿಗೆ ಜಗಳ ತೆಗೆಯುತ್ತಿದ್ದರು ಎನ್ನಲಾಗಿದೆ. ಈ ಬಗ್ಗೆ ಲಲಿತ ಕೇಳಿದರೆ ಅವಾಚ್ಯ ಶಬ್ದಗಳಿಂದ ನಿಂದಿಸುತ್ತಿದ್ದರು?. ಇದೇ ವಿಚಾರಕ್ಕೆ ಒಮ್ಮೆ

ನಾಗರಾಜ ಮತ್ತು ಲಲಿತಾ ಅವರ ಮೇಲೆ ಹಲ್ಲೆಗೆ ಸುಧಾರಾಣಿ ಮತ್ತು ನಟರಾಜ ದಂಪತಿ ಮುಂದಾಗಿದ್ದರು. ಜೂ.16 ರಂದು ಸರ ಕದ್ದಿದ್ದೀಯಾ ಕಳ್ಳಿ ಎಂದು ಜಗಳ ತೆಗೆದು ಲಲಿತಾಗೆ ಬಾಯಿಗೆ ಬಂದಂತೆ ಸುಧಾರಾಣಿ ಬೈಯ್ದಿದ್ದಾರೆ. ಅಂದು ಸಂಜೆ 5.30 ರ ಸುಮಾರಿನಲ್ಲಿ ಪುನಃ ಜಗಳ ತೆಗೆದು ಬಾಯಿಗೆ ಬಂದಂತೆ ಬೈದು ಲಲಿತಾ ಮೇಲೆ ಹಲ್ಲೆ ಮಾಡಲು ನಟರಾಜ ಮತ್ತು ಸುಧಾರಾಣಿ ದಂಪತಿ ಹೋಗಿದ್ದಾರೆ?. ಇದರಿಂದ ಬೇಸರಗೊಂಡ ಲಲಿತ ಮನೆ ಬಿಟ್ಟು ಹೋಗಿದ್ದು, ನಾಗರಾಜ ಎಲ್ಲಾ ಕಡೆ ಹುಡುಕಾಡಿದ್ದಾರೆ. ಜೂ.17 ರಂದು ಬೆಳಿಗ್ಗೆ ನಂಜದೇವರಕಾವಲು ಗ್ರಾಮದ ಅವರ ಜಮೀನಿನಲ್ಲಿ ಕಳೆನಾಶಕ ಕುಡಿದು

ಅರೆ ಪ್ರಜ್ಞಾ ಸ್ಥಿತಿಯಲ್ಲಿ ಲಲಿತ ಬಿದ್ದಿದ್ದು ಕೂಡಲೇ ಅವರನ್ನು ನಗರದ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಜೂ.20 ರಂದು ರಾತ್ರಿ ಲಲಿತಾ ಸಾವನ್ನಪ್ಪಿದ್ದಾರೆ.
ಬುಧವಾರ ಮಗಳ ಸಾವಿನ ಸುದ್ದಿ ಕೇಳಿ ಲಲಿತ ತಾಯಿ ಲಕ್ಷಮ್ಮ (75) ಕೂಡ ನಿಧನರಾಗಿದ್ದಾರೆ. ಮನೆಯ ಒಡತಿಗೆ ಭೋಗ್ಯದಾರರ ಕಿರುಕುಳ ನೀಡಿದ್ದಕ್ಕೆ ಮನೆಯ ಒಡತಿ ಲಲಿತ ಕಳೆನಾಶಕ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು

ಆರೋಪಿಸಲಾಗಿದೆ. ಹಾಸನ ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

LEAVE A REPLY

Please enter your comment!
Please enter your name here