ಕಳೆದ 18 ವರ್ಷಗಳಿಂದ ಅಂದರೆ 2004ರಿಂದ 2021 ಭಾರತೀಯ ಸೇನೆ ” ರಜಪೂತ್ ರೆಜಿಮೆಂಟ್ ” ನಲ್ಲಿ ನಿರಂತರ ದೇಶ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ ನಮ್ಮ ಹಾಸನ ಜಿಲ್ಲೆಯ ಹೆಮ್ಮೆಯ ಪುತ್ರ ಅಹಮದ್ ಅವರಿಗೆ ಸಕಲೇಶಪುರದಲ್ಲಿ ಕುಟುಂಬಸ್ಥರು , ಸ್ನೇಹಿತರು , ಊರಿನವರಿಂದ ಸವಿನೆನಪಿನ ಕೃತಜ್ಞತಾ ಸನ್ಮಾನ !!
![](https://hassananews.com/wp-content/uploads/2022/01/IMG_20220125_093752_336.jpg)
ನೀವು ನೋಡ್ತಾ ಇರೋ ಭಾವಚಿತ್ರಗಳ ಖಡಕ್ ಯೋಧ ಕಳೆದ 2005 ರಿಂದ 2008 ರವರೆಗೆ ಜಮ್ಮು ಮತ್ತು ಕಾಶ್ಮೀರದಲ್ಲಿ OP ರಕ್ಷಕ ಮತ್ತು OP ಪರಾಕ್ರಮ್ ಕಾರ್ಯಾಚರಣೆಗಳಲ್ಲಿ ಭಾಗವಹಿಸಿ.
![](https://hassananews.com/wp-content/uploads/2022/01/IMG_20220125_093752_410-1.jpg)
2011 ರಿಂದ 2013 ಸಿಕ್ಕಿಂ ಎತ್ತರದ ಪ್ರದೇಶ, ಚೀನಾ ಗಡಿ ಕಾರ್ಯಾಚರಣೆಗಳು ನಡೆಸಿ.
ವಿಶೇಷ ಟ್ರೋಗಾಗಿ 2017 UN ಮಿಸನ್ ಕಾಂಗೋ (ದಕ್ಷಿಣ ಆಫ್ರಿಕಾ) ಹೀಗೆ ದೇಶಕ್ಕಾಗಿ ಜೀವದದ ಹಂಗಿಲ್ಲದೆ ಹೋರಾಡುತ್ತ
![](https://hassananews.com/wp-content/uploads/2022/01/IMG_20220125_093752_460.jpg)
ಇಂದು ತಮ್ಮ ವೃತ್ತಿ ಜೀವನಕ್ಕೆ ನಿವೃತ್ತಿ ಘೋಷಿಸಿ ಮರಳಿ ಮನೆಗೆ ಬಂದಿದ್ದು ., ಈ ವರೆಗೂ ದೇಶಕ್ಕಾಗಿ ಸಲ್ಲಿಸಿದ ಸೇವೆ ಹೆಮ್ಮೆಯ ವಿಷಯವಾಗಿದ್ದು ಮತ್ತೊಂದು ಜನುಮ ಅಂತಿದ್ದರೆ , ಪುನಃ ದೇಶ ಸೇವೆ ಅಂದರೆ ಭಾರತೀಯ ಸೇನಾಪಡೆಯಲ್ಲೇ ಕರ್ತವ್ಯ ಸಲ್ಲಿಸಲು ಇಚ್ಚಿಸುತ್ತೇನೆ ಎಂದರು .
![](https://hassananews.com/wp-content/uploads/2022/01/IMG_20220125_093752_510.jpg)
ಅಹಮದ್ ಬೇಲೂರು ಇವರು ನಿವೃತ್ತಿ ಜೀವ ಸುಖ ಶಾಂತಿ ನೆಮ್ಮದಿ ಸಂತೋಷದಿಂದ ಕೂಡಿರಲಿ ಎಂದು ಹಾಸನ ಜನತೆಯ ಪರವಾಗಿ ಶುಭ ಆಶಿಸೋಣ ಧನ್ಯವಾದಗಳು
![](https://hassananews.com/wp-content/uploads/2022/01/IMG_20220125_093006_306.jpg)