ಭಾರತೀಯ ವೈದ್ಯಕೀಯ ಸಂಘ ಹಾಗೂ ಸಮುದಾಯ ಕೇಂದ್ರ ಮೊಸಳೆ ಹೊಸಳ್ಳಿಯಲ್ಲಿ ಕೊರೋನ ಜಾಗೃತಿ ಅಭಿಯಾನ ಹಮ್ಮಿಕೊಂಡಿದ್ದು.
ಅಭಿಯಾನದ ನೇತೃತ್ವವನ್ನು ಡಾಕ್ಟರ್ ರಮೇಶ್ ಅಧ್ಯಕ್ಷರು ಭಾರತೀಯ ವೈದ್ಯಕೀಯ ಸಂಘ ಹಾಸನ ಇವರು ವಹಿಸಿದ್ದರು. ಡಾಕ್ಟರ್ ರಮೇಶ್ ಮಾತನಾಡಿ ಕೊರೋನ ಎಂಬ ಹೆಮ್ಮಾರಿಯನ್ನು ಓಡಿಸಲು ಪ್ರತಿಯೊಬ್ಬರು ಯೋಧರ ಆಗಬೇಕು ಹಾಗೂ ಎಸ್ಎಂಎಸ್ ಅಂದರೆ ಸ್ಯಾನಿಟೈಸರ್ , ಮಾಸ್ಕ್, ಸೋಶಿಯಲ್ ಡಿಸ್ಟೆನ್ಸ್ ಪಾಲಿಸಬೇಕು ಎಂದು ತಿಳಿಸಿದರು.
![](https://hassananews.com/wp-content/uploads/2020/10/img-20201023-wa00197992137852291480410-1024x768.jpg)
ಡಾಕ್ಟರ್ ತೇಜಸ್ವಿ ವೈದ್ಯಾಧಿಕಾರಿಗಳು ಮೊಸಳೆಹೊಸಹಳ್ಳಿ ಇವರು ಮಾತನಾಡಿ ಪ್ರತಿಯೊಬ್ಬರೂ ತಾವಾಗಿ ಬಂದು ಕೋರೋಣ ಪರೀಕ್ಷೆ ಮಾಡಿಸಿಕೊಂಡು ಕೋರೋಣ ತಡೆಗಟ್ಟುವಲ್ಲಿ ಎಲ್ಲರೂ ಸಹಕರಿಸಬೇಕೆಂದು ಕೇಳಿಕೊಂಡರು.
ಡಾಕ್ಟರ್ ವಾಗೀಶ್ ಕಾರ್ಯದರ್ಶಿ ಹಾಗೂ ಸಮುದಾಯ ಆರೋಗ್ಯ ಕೇಂದ್ರದ ಸಿಬ್ಬಂದಿಗಳು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು
![](https://hassananews.com/wp-content/uploads/2020/10/img-20201023-wa00204951648992956346874.jpg)