ಕುಶಾಲನಗರದ ಗ್ರಾಮಾಂತರ ಠಾಣೆಯ ವ್ಯಾಪ್ತಿಯಲ್ಲಿ
ಮಕ್ಕಳ ದಿನಾಚರಣೆಯ ದಿನವೇ ಮಕ್ಕಳು ನೀರು ಪಾಲು: ಹಾಸನ ಗಡಿ ಭಾಗದಲ್ಲಿ ಶವಗಳು ತೇಲಿ ಬಂದು ಅವುಗಳನ್ನು ಸ್ಥಳೀಯ ಯುವಕರು ಮೇಲಕ್ಕೆ ತಂದಿದ್ದಾರೆ.
![](https://hassananews.com/wp-content/uploads/2020/11/picsart_11-14-043439475857452258343-1024x1024.jpg)
ಹಾಸನ – ಕೊಡಗು ಜಿಲ್ಲೆಯ ಗಡಿಭಾಗದಲ್ಲಿ ತಾಯಿ ತನ್ನ ಮೂವರು ಮಕ್ಕಳನ್ನು ನೀರಿಗೆ ತಳ್ಳಿ ತಾನು ಸಹ ನೀರಿಗೆ ಧುಮುಕಿ ರುವ ಪ್ರಕರಣ ಶನಿವಾರ ಬೆಳಿಗ್ಗೆ 10:30 ಸಮಯದಲ್ಲಿ ನಡೆದಿದೆ. ಒಂದು ಹೆಣ್ಣು ಮಗು ಮತ್ತು ಇಬ್ಬರು ಗಂಡು ಮಕ್ಕಳು ಸೇರಿದಂತೆ ಮೂವರು ಮಕ್ಕಳ ಶವ ಸಿಕ್ಕಿದ್ದು ತಾಯಿಯ ಶವ ಸಿಕ್ಕಿರುವುದಿಲ್ಲ.
![](https://hassananews.com/wp-content/uploads/2020/11/picsart_11-14-043540689639132752959-1-1024x1024.jpg)
ಮೂಲತಃ ಚಿತ್ರದುರ್ಗ ಜಿಲ್ಲೆಯವರಾದ ಇವರು ತೊರೆನೂರು ಶುಂಟಿ ಶುದ್ಧೀಕರಣದಲ್ಲಿ ಕೆಲಸ ಮಾಡುತ್ತಿದ್ದರು. ಗಂಡ ಮತ್ತು ಹೆಂಡತಿ ನಡುವೆ ಜಗಳವೇ ಇದಕ್ಕೆ ಪ್ರಮುಖ ಕಾರಣ ಎಂದು ತಿಳಿದುಬಂದಿದೆ.
![](https://hassananews.com/wp-content/uploads/2020/11/picsart_11-14-046276879054686649072-1024x1024.jpg)
ಕೊಡಗು ಜಿಲ್ಲೆಯ ಕುಶಾಲನಗರ ತಾಲ್ಲೂಕಿನ ತೊರೆನೂರು ಗ್ರಾಮದ ಬಳಿ ಇರುವ ದೊಡ್ಡ ಕಾವಲೆಯಲ್ಲಿ ಮೂವರು ಮಕ್ಕಳೊಂದಿಗೆ ತಾಯಿಯು ನೀರಿಗೆ ಧುಮುಕಿದ್ದಾಳೆ ಎಂಬ ಮಾಹಿತಿ.