ಮಾರುತಿ‌ ಬ್ರಾಂಡ್ ನ‌ ಎರಡು ಕಾರುಗಳು ನಡುವೆ ನಡೆದ ಅಪಘಾತದಲ್ಲಿ ಬ್ರೆಜ಼ಾ ಮುಂದೆ ಸ್ವಿಫ್ಟ್ ಅಪ್ಪಚ್ಚಿ

0

ಸಕಲೇಶಪುರ/ಆಲೂರು : ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಎರಡು ಕಾರುಗಳ ನಡುವೆ ಮುಖಾಮುಖಿ ಅಪಘಾತ ಸಂಭವಿಸಿ ವ್ಯಕ್ತಿಯೊಬ್ಬರು ಸ್ಥಳದಲ್ಲಿ ಮೃತಪಟ್ಟಿರುವ ಘಟನೆ ನಡೆದಿದೆ. , ಕೆಲಸದ ನಿಮಿತ್ತ ಬೆಂಗಳೂರಿನಿಂದ ಕಾರ್ಕಳಕ್ಕೆ ಸ್ವಿಫ್ಟ್ ಕಾರ್ ನಲ್ಲಿ ಹೊರಟಿದ್ದ ಬಸವರಾಜ್ (46) ರವರಿಗೆ ಎದುರಿನಿಂದ

ವೇಗವಾಗಿ ಬಂದ ಬ್ರೆಜಾ಼ ಕಾರು ಡಿಕ್ಕಿ ಹೊಡೆದ ಹಿನ್ನೆಲೆಯಲ್ಲಿ ಸ್ಥಳದಲ್ಲಿ ಮೃತಪಟ್ಟಿದ್ದಾರೆ , ಅಪಘಾತದ ರಭಸಕ್ಕೆ ಸ್ವಿಫ್ಟ್ ಕಾರು ನಜ್ಜುಗುಜ್ಜಾಗಿದ್ದು ಮೃತ ಬಸವರಾಜ್ ಅವರನ್ನು ಕಾರಿನಿಂದ ಹೊರ ತೆಗೆಯಲು ಹರಸಾಹಸ ಪಡುವಂತಾಯಿತು. , ರಾಷ್ಟ್ರೀಯ ಹೆದ್ದಾರಿಯಲ್ಲಿ

ಕಾಮಗಾರಿ ನಡೆಯುತ್ತಿದ್ದು ರಸ್ತೆ ಒಂದು ಬದಿಯಲ್ಲಿ ಎರಡು ಕಡೆ ವಾಹನಗಳ ಓಡಾಟಕ್ಕೆ ಅವಕಾಶ ನೀಡಿದ್ದು ಯಾವುದೇ ಸೂಚನೆ ಫಲಕಗಳಿಲ್ಲದೆ ಇರುವುದು ಪದೇ ಪದೇ ಅಪಘಾತಗಳಿಗೆ ಕಾರಣವಾಗುತ್ತಿದೆ , ಈ ಅಪಘಾತಕ್ಕು ಅವೈಜ್ಞಾನಿಕ ಕಾಮಗಾರಿ ನಡುವಳಿ ಕಾರಣ ಅಂತಾರೆ ಸ್ಥಳೀಯರು . , ರಾಷ್ಟ್ರೀಯ ಹೆದ್ದಾರಿಯಲ್ಲಿ  ಸರಿಯಾದ ನಾಮಫಲಕಗಳನ್ನು  ಅಳವಡಿಸದಿದ್ದರೆ  ಉಗ್ರ ಹೋರಾಟ ನಡೆಸಲಾಗುವುದು ಗುತ್ತಿಗೆದಾರರಿಗೆ ಸ್ಥಳೀಯರು ಎಚ್ಚರಿಸಿದ್ದಾರೆ

LEAVE A REPLY

Please enter your comment!
Please enter your name here