ಬೇಲೂರು:
ತಾಲೂಕಿನ ಕುಶವಾರ ಗ್ರಾಮ ಪಂಚಾಯ್ತಿಯ ಚೌಡನಹಳ್ಳಿ ಗ್ರಾಮದಲ್ಲಿ ಮಹಿಳೆಯರ ಸಬಲೀಕರಣ ಕುರಿತು ಕಾರ್ಯಕ್ರಮವನ್ನು ಮಂಗಳವಾರ ಆಯೋಜಿಸಲಾಗಿತ್ತು
ಸ್ಥಳೀಯರಾದ ಕೌರಿ ಸಂಜಯ್ ಆವರು ಆಯೋಜಿಸಿದ್ದ ಈ ಕಾರ್ಯಕ್ರಮದಲ್ಲಿ
![](https://hassananews.com/wp-content/uploads/2021/08/IMG-20210825-WA0053-1.jpg)
ಮಹಿಳಾ ಸಬಲೀಕರಣದ ಕುರಿತು ಮಾತನಾಡಿದ ವಿಶೇಷ ಆಹ್ವಾನಿತರಾದ ಸೌಭಾಗ್ಯ ಅವರು ಮಹಿಳೆಯರು ಯಾವ ರೀತಿ ಸಬಲೀಕರಣಗೊಂಡು ಸಮಾಜದ ಮುಖ್ಯವಾಹಿನಿಯಲ್ಲಿ ಪಾಲ್ಗೊಳ್ಳಬೇಕು ಎಂಬ ಬಗ್ಗೆ ವಿವರಿಸಿದರು
ಅಲ್ಲದೆ,
![](https://hassananews.com/wp-content/uploads/2021/08/IMG-20210825-WA0054.jpg)
ಗ್ರಾಮದ ಸರ್ಕಾರಿ ಪ್ರೌಢಶಾಲೆಗೆ ಸುಣ್ಣ-ಬಣ್ಣ ಬಳಿದು ಶಾಲೆಯನ್ನು ಸ್ವಚ್ಛಗೊಳಿಸುವುದಾಗಿ ಸೌಭಾಗ್ಯ ಅವರು ಪ್ರಕಟಿಸಿದರು. ಕಾರ್ಯಕ್ರಮದಲ್ಲಿ ಹಾಜರಿದ್ದ ಕುಶವಾರ ಗ್ರಾಮ ಪಂಚಾಯ್ತಿ ಸದಸ್ಯ ನಂದೀಶ್ ಅವರು ಇದಕ್ಕೆ ತಕ್ಷಣ ಸ್ಪಂದಿಸಿ, ಶಾಲೆಗೆ
![](https://hassananews.com/wp-content/uploads/2021/08/IMG-20210814-WA0058-4.jpg)
ಬೇಕಾದ ಸುಣ್ಣ, ಬಣ್ಣವನ್ನು ತಾವೇ ಒದಗಿಸುವುದಾಗಿ ಹೇಳಿದರು. ಅಲ್ಲದೆ,
![](https://hassananews.com/wp-content/uploads/2021/08/IMG-20210825-WA0052.jpg)
ಮುಂದಿನ ದಿನಗಳಲ್ಲಿ ಶಾಲೆಯ ಆವರಣದಲ್ಲಿ ಸ್ವಚ್ಛತಾ ಕಾರ್ಯಕ್ರಮ ಆಯೋಜಿಸಿ, ಶಾಲೆಗೆ ಸುಣ್ಣ-ಬಣ್ಣ ಬಳಿಯುವ ಕಾರ್ಯವನ್ನು ತಾವೇ ಖುದ್ದಾಗಿ ನಿಂತು ನಡೆಸುವುದಾಗಿ ಭರವಸೆ ನೀಡಿದರು.
ಇದೇ ವೇಳೆ ಗ್ರಾಮದ ಮಹಿಳೆಯರಿಗೆ ರಂಗೋಲಿ ಸ್ಪರ್ಧೆ ಮತ್ತು ವಿವಿಧ ಗ್ರಾಮೀಣ ಕ್ರೀಡಾಕೂಟವನ್ನು ಆಯೋಜಿಸಲಾಗಿತ್ತು ಗ್ರಾಮದ ಮಹಿಳೆಯರು ಉತ್ಸಾಹದಿಂದ ಪಾಲ್ಗೊಂಡಿದ್ದರು.* ರಂಗೋಲಿ ಸ್ಪರ್ಧೆಯಲ್ಲಿ
![](https://hassananews.com/wp-content/uploads/2021/08/IMG-20210825-WA0051.jpg)
17 ಮಂದಿ ಭಾಗವಹಿಸಿದ್ದರು ಮತ್ತು ಅನೇಕ ಗ್ರಾಮೀಣ ಕ್ರೀಡಾಕೂಟವನ್ನು ಆಯೋಜಿಸಲಾಗಿತ್ತು ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಗಣ್ಯರು ಬಹುಮಾನ ವಿತರಿಸಿದರು* ಈ
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಂಪಿ ಮಂಜುನಾಥ್ ರವರು ವಹಿಸಿಕೊಂಡಿದ್ದರು ಕಾರ್ಯಕ್ರಮದಲ್ಲಿ
![](https://hassananews.com/wp-content/uploads/2021/08/Screenshot_2021-08-25-14-56-22-117_com.whatsapp.jpg)
ಕೌರಿ ಸಂಜಯ್, ಸೌಭಾಗ್ಯ, ನಂದೀಶ್ ಅವರಲ್ಲದೆ ಕುಶವಾರ ಗ್ರಾಮ ಪಂಚಾಯ್ತಿ ಮಾಜಿ ಉಪಾಧ್ಯಕ್ಷ ಮಂಜುನಾಥ್ (ಕಡ್ಲೆ), ಲೋಕೇಶ್, ಕುಮಾರ್, ಲೋಕೇಶ್ ಪ ಕಾರ್ಯಕರ್ತರು, ಸ್ಥಳೀಯರು ಪಾಲ್ಗೊಂಡಿದ್ದರು.