ಹಾಸನ / ಬೇಲೂರು : ಇಂದು (3 ಮೇ 2021 ಗುರುವಾರ) ಅರೇಹಳ್ಳಿಯ ಕೋವಿಡ್ ಸೆಂಟರಿನಲ್ಲಿ
ಕೆ.ಎಸ್. ಲಿಂಗೇಶ್ (ಸ್ಥಳೀಯ ಶಾಸಕರು) ಎರಡು ಕಾನ್ಸಂಟ್ರೇಟರ್ ಗಳನ್ನು ಕೋವಿಡ್ ಸೆಂಟರಿಗೆ ನೀಡಿ ಆಕ್ಸಿಜನ್ ಸಿಲಿಂಡರ್’ಗಳನ್ನು ಒದಗಿಸುವ ವಾಗ್ದಾನ ಮಾಡಿದರು. ಜಿಲ್ಲಾ ಪಂಚಾಯಿತಿ ಉಪಕಾರ್ಯದರ್ಶಿ ಚಂದ್ರಶೇಖರ್ ರವರು ಮಾತನಾಡಿ
🌳🌳🌳 “ಹ್ಯುಮ್ಯಾನಿಟೇರಿಯನ್ ರಿಲೀಫ್ ಸೊಸೈಟಿಯು (ಹೆಚ್ ಅರ್ ಎಸ್ ಸಂಸ್ಥೆ) ರೋಗಿಗಳಿಗೆ ಮಾನಸಿಕವಾಗಿ ಧೈರ್ಯ ತುಂಬುವುದರ ಜೊತೆಗೆ ಎಲ್ಲಾ ರೀತಿಯ ಸೌಲಭ್ಯಗಳನ್ನು ಒದಗಿಸುತ್ತಾ ಆರೋಗ್ಯ ಸೇವೆಗೈಯುತ್ತಿರುವುದನ್ನು ಕಂಡು ನಾವು ಪ್ರಭಾವಿತರಾಗಿದ್ದೇವೆ, ಜಿಲ್ಲೆಯಾದ್ಯಂತ ಈ ಸೇವೆಯನ್ನು ವ್ಯಾಪಕಗೊಳಿಸಿ, ಇತರರಿಗೂ ಇದು ಮಾದರಿಯಾಗಲೆಂದು ಇದರ ಪ್ರಚಾರ ನಡೆಸುತ್ತೇವೆ.
![](https://hassananews.com/wp-content/uploads/2021/06/IMG_20210603_205138_403-1024x768.jpg)
ಇದನ್ನು ನೋಡಿ ಎಲ್ಲಾ ಎನ್.ಜಿ.ಒ. ಸ್ಥಳೀಯ ಸಂಘ ಸಂಸ್ಥೆಗಳು ಮುಂದೆ ಬಂದು ಕೋವಿಡ್ ಸೆಂಟರ್ ಗಳಲ್ಲಿ ಕೆಲಸ ನಿರ್ವಹಿಸುವಂತಾಗಲಿ. ಸ್ವಯಂ ಸೇವಾ ಸಂಸ್ಥೆಗಳು ಸರಕಾರದ ಸಹಯೋಗದಿಂದ ಕೆಲಸ ಮಾಡಲು ಮುಂದಾದರೆ ಸರಕಾರದ ಮೇಲಿರುವ ಹೊರೆಯಲ್ಲಿ ಸ್ವಲ್ಪ ಮಟ್ಟಿಗೆ ಇಳಿಕೆಯಾಗಬಹುದು. ಎಂದರು.
![](https://hassananews.com/wp-content/uploads/2021/06/IMG_20210603_205141_354-1024x768.jpg)
ಈ ಸಂದರ್ಭದಲ್ಲಿ ಕಾರ್ಯನಿರ್ವಾಹಕ ಅಧಿಕಾರಿ ಶ್ರೀ ರವಿಕುಮಾರ್ ಡಿ ಹೆಚ್ ಒ ಡಾ|| ವಿಜಯ್, ತಹಸೀಲ್ದಾರ್ ನಟೇಶ್,ಸರ್ಕಲ್ ಇನ್ಸ್ ಪೆಕ್ಟರ್ ಶ್ರೀಕಾಂತ್, ಡಾ||ನರಸೇಗೌಡ, ಡಾ||ಮಮತಾ, ನಟರಾಜ್ ರತ್ನಮ್ಮ ಜಿಲ್ಲಾ ಪಂಚಾಯತ್ ಸದಸ್ಯರು, ಪಿ ಡಿ ಒ ಸಂತೋಷ್, ಗ್ರಾಮ ಪಂಚಾಯಿತಿ ಅಧ್ಯಕ್ಷರು ಮತ್ತು ಸದಸ್ಯರು, 🌳🌳🌳🌳ಹೆಚ್. ಆರ್. ಎಸ್ ನ ವಲಯ ಸಂಚಾಲಕರಾದ ಮುಜೀಬುರ್ರಹ್ಮಾನ್, ಅಸಿಸ್ಟೆಂಟ್ ಕ್ಯಾಪ್ಟನ್ ಅಬ್ರಾರ್ ಅಹ್ಮದ್, ಹೆಚ್ ಆರ್ ಎಸ್ ಗ್ರೂಪ್ ಲೀಡರ್ ಹೈದರ್ ಅಲಿ ಮತ್ತು ಸದಸ್ಯರು ಉಪಸ್ಥಿತರಿದ್ದರು.