![](https://images.prajavani.net/prajavani%2Fimport%2Fsites%2Fpv%2Ffiles%2Farticle_images%2F2020%2F03%2F07%2Ffile79lof0vhr0wwgo912vv1583595250.jpg?auto=format%2Ccompress&fmt=webp&fit=max&format=webp&w=900&dpr=1.0)
ಹಾಸನ : ಹಾಸನ ಆಕಾಶವಾಣಿಯಲ್ಲಿ ಇಂದು ಬೆಳಗ್ಗೆ 09.10 ಗಂಟೆಯಿಂದ 11.10 ವರೆಗೆ ಜಿಲ್ಲಾಧಿಕಾರಿಗಳಾದ ಸತ್ಯಭಾಮ ಅವರೊಂದಿಗೆ “ಜನಸ್ಪಂದನ- ನೇರ ಫೋನ್ ಇನ್ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ. ನಗರಸಭೆ ಅಧ್ಯಕ್ಷರು, ಆಯುಕ್ತರು ಮತ್ತು ಹಿರಿಯ ಅಧಿಕಾರಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿದ್ದಾರೆ. ಹಾಸನ ನಗರಸಭಾ ವ್ಯಾಪ್ತಿಯ
ಸಮಸ್ಯೆಗಳ ಬಗ್ಗೆ ದೂರುಗಳನ್ನು ಸ್ವೀಕರಿಸಿ ಸಮಸ್ಯೆಗೆ ಪರಿಹಾರ
ಕಂಡುಕೊಳ್ಳುವ ಸಲುವಾಗಿ ಆಕಾಶವಾಣಿಯ ಮೂಲಕ ಈ ನೇರ
ಫೋನ್ ಇನ್ ಕಾರ್ಯಕ್ರಮವು ಅನುಕೂಲವಾಗಲಿದೆ. ಹಾಸನ ನಗರ
ವ್ಯಾಪ್ತಿಯಲ್ಲಿನ ಮೂಲಭೂತ ಸೌಕರ್ಯಗಳು, ನಾಗರೀಕ ಸೇವೆ,
ಇವೇ ಮುಂತಾದ ಕುಂದು ಕೊರತೆಗಳನ್ನು ಕುರಿತು ಸಾರ್ವಜನಿಕರು
ನೇರವಾಗಿ ಸಂವಾದ ಮಾಡುವ ಮೂಲಕ ಸಮಸ್ಯೆಗಳನ್ನು ಜಿಲ್ಲಾಧಿಕಾ-
ರಿಗಳ ಗಮನಕ್ಕೆ ತರಬಹುದಾಗಿದೆ.
ಸಾರ್ವಜನಿಕರು ಸಂಪರ್ಕಿಸಬೇಕಾದ ದೂರವಾಣಿ ಸಂಖ್ಯೆ: 08172-246289, 08172-245258 ಈ ಸಂಖ್ಯೆಗೆ ಸಂಪರ್ಕಿಸಿ ಕುಂದು ಕೊರತೆಗಳನ್ನು ತಿಳಿಸಬಹುದಾಗಿದೆ.