ಎಣ್ಣೆ ಚಾಲೆಂಜ್ ವ್ಯಕ್ತಿ ಸಾವು, ಚಾಲೆಂಜ್ ಮಾಡಿದವರ ವಿರುದ್ಧ ಮೃತನ ಮಗಳಿಂದ FIR ದೂರು

0

ಹಾಸನ : ಜಿಲ್ಲೆಯ ಹೊಳೆನರಸೀಪುರ ತಾಲೂಕಿನ ಸಿಗರನಹಳ್ಳಿಯಲ್ಲಿ ಮದ್ಯ ಸೇವನೆ ಸಂಬಂಧ ನಡೆದ ಪಂದ್ಯದಲ್ಲಿ ತಿಮ್ಮೇಗೌಡ (60) ಎಂಬಾತ ಮೃತಪಟ್ಟಿರುವ ಘಟನೆ ಸೋಮವಾರ ಸಂಜೆ ನಡೆದೋಗಿದೆ ., ಸಿಗರನಹಳ್ಳಿ ಗ್ರಾಮದ ಬಸ್‌ ನಿಲ್ದಾಣದಲ್ಲಿ ಕೃಷ್ಣೇಗೌಡ ಎಂಬುವರು ನೀಡಿದ ಮದ್ಯವನ್ನು ದೇವರಾಜು, ತಿಮ್ಮೇಗೌಡರ ಜೊತೆ ಅರ್ಧ ಗಂಟೆಯಲ್ಲಿ 90 MLನ ಬರೋಬ್ಬರಿ 10 ಪ್ಯಾಕೆಟ್‌ ಮದ್ಯ ಸೇವನೆಗೆ ಚಾಲೆಂಜ್‌ ಮಾಡಿ ಬಿಟ್ಟಿದ್ದು, ತಿಮ್ಮೇಗೌಡ 90 MLನ 10 ಸಹಸ್ರ ಪ್ಯಾಕೆಟ್‌ ಮದ್ಯ ಸೇವಿಸಿದ ಕೇವಲ ಅರ್ಧ ಗಂಟೆ ನಂತರ ರಕ್ತ ಸಹಿತ ವಾಂತಿ ಮಾಡಿಕೊಂಡಿದ್ದಯ ಪ್ರಜ್ಞೆ ತಪ್ಪೋಗಿದ್ದಾರೆ.

ತಿಮ್ಮೇಗೌಡರನ್ನು ಗ್ರಾಮದ ನಾಲ್ಕಾರು ಮಂದಿ ಎತ್ತಿಕೊಂಡು ಹೋಗಿ ಮನೆಯಲ್ಲಿ ಮಲಗಿಸಿದ್ದು, ಮನೆಯಲ್ಲಿ ಯಾರೂ ಇಲ್ಲದ ಕಾರಣ ನಿತ್ರಾಣಗೊಂಡಿದ್ದ ತಿಮ್ಮೇಗೌಡ ಮಲಗಿದ್ದಲ್ಲೇ ಅಸುನೀಗಿದ್ದಾರೆ. ಘಟನೆಯ ಸಂಬಂಧ ನಗರ ಪೊಲೀಸ್‌ ಠಾಣೆಯಲ್ಲಿ ಮೃತರ ಪುತ್ರಿ ದೂರು ದಾಖಲಿಸಿದ್ದು, ದೇವರಾಜ ಹಾಗೂ ಕೃಷ್ಣೇಗೌಡರ ವಿರುದ್ಧ FIR ದಾಖಲಿಸಲಾಗಿದೆ. , ತಿಮ್ಮೇಗೌಡರ ಮೃತದೇಹವನ್ನು ಹಾಸನದ ಹಿಮ್ಸ್‌ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿತ್ತು.

LEAVE A REPLY

Please enter your comment!
Please enter your name here