ರೈತ ಬೆಳಗ್ಗೆ ಗದ್ದೆಗೆ ತೆರಳುವ ವೇಳೆ ಕಾಡಾನೆ ದಾಳಿ

0

ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ಸುಳ್ಳಕ್ಕಿ ಗ್ರಾಮ ಮೇಗಲ ಕೇರಿಯಲ್ಲಿ ಮಂಜುನಾಥ  ಅಲಿಯಾಸ್  ಕೆಂಪಣ್ಣ(54) ಎಂಬ ರೈತ ಬೆಳಗ್ಗೆ ಗದ್ದೆಗೆ ತೆರಳುವ ವೇಳೆ  ಕಾಡಾನೆ ದಾಳಿಯಿಂದ ಸ್ಥಳದಲ್ಲೇ ಮೃತಪಟ್ಟಿದ್ದಾರೆ.ಅರಣ್ಯ ಇಲಾಖೆಯ ವಿರುದ್ದ ಗ್ರಾಮಸ್ಥರ ಆಕ್ರೋಶ.

ಮೊನ್ನೆ ನಡೆದ ಘಟನೆ ?

ವಳಲಹಳ್ಳಿ ಗ್ರಾಮ ಪಂಚಾಯತ್ ಬಳಿ ಕಲ್ತೋಟ ಗ್ರಾಮದಲ್ಲಿ ಆನೆ ದಾಳಿಗೆ ಬಲಿಯಾಗಿದ್ದರು

ಕೇರಳ ಮೂಲದ ಕಾರ್ಮಿಕನೋರ್ವರ ಮೃತ ದೇಹ ಅರೆ ಕುಂಬ್ರಿ ಕಾಫಿ ಎಸ್ಟೇಟ್ ಒಳಗೆ ಪತ್ತೆಯಾಗಿತ್ತು. ಘಟನೆ ನಡೆದು 2 ದಿನ ಕಳೆದ ನಂತರ ಸಾವು ಗೋಚರಿಸಿತ್ತು ಎನ್ನಲಾಗಿದ್ದು ಸಾಲು ಸಾಲು ಪರಿಸ್ಥಿತಿಯ ಗಂಭೀರತೆ ಬಗ್ಗೆ ಕಾಫಿ ಬೆಳೆಗಾರರು ಕಂಗಾಲಾಗಿದ್ದಾರೆ.

ಸಕಲೇಶಪುರ ತಾಲೂಕಿನಲ್ಲಿ ದಿನೇ ದಿನೇ ಆನೆ ಹಾಗೂ ಮಾನವನ ಮಧ್ಯೆ ಸಂಘರ್ಷ ಹೆಚ್ಚುತ್ತಲೇ ಸಾಗುತ್ತಿದೆ. ಆನೆಗಳಿಂದ ಮಾನವ ಹತ್ಯೆ ಹೆಚ್ಚುತ್ತಲೇ ಸಾಗುತ್ತಿದೆ. ಗ್ರಾಮ ಕಾರಣಿಕ ರಮಿಜ್ ಅಭಿವೃದ್ಧಿ ಅಧಿಕಾರಿ ಸುರೇಶ ಹಾಗೂ ಅರಣ್ಯಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದ್ದರು

ಇತ್ತೀಚೆಗಷ್ಟೇ ಅರಣ್ಯ ಇಲಾಖೆ ಒಂದು ಘಾಟಿ ಆನೆಯೊಂದನ್ನ ಹಿಡಿದು ಸ್ಥಳಾಂತರಿಸಿದ್ದರು . ಅವರ ಮುಂದಿನ ನಡೆ ಏನು ಕಾದು ನೋಡ ಬೇಕು

LEAVE A REPLY

Please enter your comment!
Please enter your name here