ಹಸಿರು ಭೂಮಿ ಪ್ರತಿಷ್ಠಾನ ಹಾಸನ ವತಿಯಿಂದ , ಸತ್ಯಮಂಗಲ ಗ್ರಾಮ ಪಂಚಾಯಿತಿ ಮತ್ತು ವಿದ್ಯಾನಗರ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘ ಇವರುಗಳು ಸೇರಿ ಇಂದು ಪರಿಸರ ಜಾಗೃತಿ ಅಭಿಯಾನವನ್ನು
![](https://hassananews.com/wp-content/uploads/2021/01/FB_IMG_1611724511617.jpg)
“ಕಸ ಹಾಕುವ ಜಾಗ ಸುಚಿ ಗೊಳಿಸುವ ಒಂದು ವಿಶಿಷ್ಟ ಕಾರ್ಯಕ್ರಮ” ಬುದ್ಧ ಮಾರ್ಗ ರಸ್ತೆ, ವಿದ್ಯಾನಗರ ಹಾಸನ ಇಲ್ಲಿ ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು.
![](https://hassananews.com/wp-content/uploads/2021/01/FB_IMG_1611724516804.jpg)
°ಹಸಿರು ಭೂಮಿ ಪ್ರತಿಷ್ಠಾನ ಮತ್ತು ಚನ್ನಪಟ್ಟಣ ಕೆರೆ ಸಂರಕ್ಷಣಾ ಮತ್ತು ಅಭಿವೃದ್ಧಿ ಸಮಿತಿಯ ವತಿಯಿಂದ 72ನೇ ಗಣರಾಜ್ಯೋತ್ಸವದ ಅಂಗವಾಗಿ ಪರಿಸರ ಜಾಗೃತಿ ಅಭಿಯಾನದ ಮೂಲಕ ” *ಪೈಪ್ ಕಂಪೋಸ್ಟಿಂಗ್ ಪ್ರಾತ್ಯಕ್ಷತೆ”* ಯನ್ನು ಹಮ್ಮಿಕೊಳ್ಳಲಾಗಿತ್ತು.
![](https://hassananews.com/wp-content/uploads/2021/01/FB_IMG_1611724569758.jpg)
ಕಾರ್ಯಕ್ರಮದ ಉದ್ಘಾಟನೆಯನ್ನು ಹಾಸನ ವಿಧಾನಸಭಾ ಕ್ಷೇತ್ರದ ಶಾಸಕರಾದ ಶ್ರೀ ಪ್ರೀತಂ ಜೆ ಗೌಡರವರು ಗಿಡಕ್ಕೆ ನೀರನ್ನು ಹಾಕುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು.
![](https://hassananews.com/wp-content/uploads/2021/01/FB_IMG_1611724565788.jpg)
ಡಾಕ್ಟರ್ ಮಂಜುನಾಥ್ ರವರು ಪೈಪ್ ಕಂಪೋಸ್ಟಿಂಗ್ ಪ್ರಾತ್ಯಕ್ಷತೆ ಯನ್ನು ಮಾಡುವುದರ ಮೂಲಕ ಕಾರ್ಯಕ್ರಮದಲ್ಲಿ ಬಂದಿರುವ ಜನರಿಗೆ ಅರಿವು ಮೂಡಿಸಿದರು.
![](https://hassananews.com/wp-content/uploads/2021/01/FB_IMG_1611724558671.jpg)
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹಸಿರು ಭೂಮಿ ಪ್ರತಿಷ್ಠಾನದ ಅಧ್ಯಕ್ಷರಾದ ಶ್ರೀ ಪುಟ್ಟಯ್ಯನವರು ವಹಿಸಿದ್ದರು.
![](https://hassananews.com/wp-content/uploads/2021/01/FB_IMG_1611724561008.jpg)
ಕಾರ್ಯಕ್ರಮದಲ್ಲಿ ಹಸಿರು ಭೂಮಿ ಪ್ರತಿಷ್ಠಾನದ ಸದಸ್ಯರು, ಲಯನ್ಸ್ ಕ್ಲಬ್ನ ಸದಸ್ಯರು, ಬಲಮುರಿ ಸೇವಾ ಗಣಪತಿ ಸಂಘದ ಸದಸ್ಯರು,
![](https://hassananews.com/wp-content/uploads/2021/01/FB_IMG_1611724574457.jpg)
ಮುಂಜಾನೆ ಮಿತ್ರರ ತಂಡದವರು, ಹಾಸನದ ಅನೇಕ ಸ್ವಯಂ ಸೇವಾ ಸಂಘದ ಸದಸ್ಯರುಗಳು ಮತ್ತು ಸ್ಥಳೀಯ ನಿವಾಸಿಗಳು ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.
![](https://hassananews.com/wp-content/uploads/2021/01/FB_IMG_1611724582513.jpg)
![](https://hassananews.com/wp-content/uploads/2021/01/FB_IMG_1611724586704.jpg)