ಹಾಸನ : ಕಳೆದ ರಾತ್ರಿ ಗುಂಡ್ಯ ಬಳಿ ನಿಂತಿದ್ದ ಟ್ಯಾಂಕರ್ ಗೆ ಬಸ್ ಒಂದು ಡಿಕ್ಕಿ ಹೊಡೆದಿತ್ತು ಹೊಡೆತದ ರಭಸಕ್ಕೆ ಬಸ್ ನಿರ್ವಾಹಕ ತೀವ್ರವಾಗಿ ಗಾಯಗೊಂಡು ಮಧ್ಯರಾತ್ರಿ ರಸ್ತೆ ಬದಿ ಯಾರೂ ಸಹಾಯಕ್ಕೆ ಬಾರದಿದ್ದಾಗ ಹಾಸನದಿಂದ ಮಂಗಳೂರಿಗೆ ತೆರಳುತ್ತಿದ್ದ ಆ್ಯಂಬುಲೆನ್ಸ್ ನ ಚಾಲಕ *ಮನುಗೌಡ* (ಹಾಸನ) ಎಂಬವರು ಬಸ್ ನಿರ್ವಾಹಕ ಮುಹಮ್ಮದ್ ಅಶ್ರಫ್ ಕಿನ್ಯಾ ಅವರನ್ನು ತಮ್ಮ ಆ್ಯಂಬುಲೆನ್ಸ್ ಗೆ ಹಾಕಿ ಮೆಲ್ಕಾರ್ ಆಸ್ಪತ್ರೆ ಗೆ ತಲುಪಿಸಿ ಗಾಯಾಳುವನ್ನು ಹಸ್ತಾಂತರಿಸಿ ಮಾನವೀಯತೆ ಮೆರೆದಿರುತ್ತಾರೆ,
ಈ ಅಪಘಾತಕ್ಕೆ ರಸ್ತೆಯಲ್ಲಿ ನಿಲ್ಲಿಸಿದ ಟ್ಯಾಂಕರ್ ಚಾಲಕನ ನಿರ್ಲಕ್ಷವೇ ಕಾರಣ ಎಂದು ಹೇಳಲಾಗುತ್ತಿದೆ
(ಹೈವೇ ರಸ್ತೆಯಲ್ಲಿ ತಮ್ಮ ವಾಹನಗಳನ್ನು ಕರ್ವ್ (ತಿರುವು ಬಳಿ) ನಿಲ್ಲಿಸಬಾರದು ಎಂದು , ಸಲಹೆ ಕೊಟ್ಡಿದ್ದಾರೆ ,ಮನು ಹಾಸನ , ಅಂತಹ ಕನಿಷ್ಠ ಜ್ಞಾನ ಇಲ್ಲದಂತ ಚಾಲಕರ ಲೈಸನ್ನನ್ನು ರದ್ದು ಪಡಿಸಿ ಕಾನೂನು ಕ್ರಮಗೊಳ್ಳಬೇಕು ಎಂದುಸಲಹೆ ನೀಡಿದ್ದಾರೆ)