ಹಾಸನ: (ಹಾಸನ್_ನ್ಯೂಸ್ !, ಕೋವಿಡ್-19 ಎರಡನೇ ಅಲೆಯಿಂದ ಹಾಸನ ನಗರದ ರಸ್ತೆ ಬದಿಯಲ್ಲಿ ಇರುವ ಜನ ಹಸಿವಿನಿಂದ ಬಳಲುತ್ತಿರೋದು ಕಾಣುತ್ತಿದ್ದೇವೆ
ಹೀಗಾಗಿ, ಹಾಸನದ ನ್ಯಾಚುರಲ್ ಸ್ಟಾರ್ ಆಕಾಶ್ ಅಭಿಮಾನಿ ಬಳಗದ ನೇತೃತ್ವದಲ್ಲಿ ಬಡ ಜನರಿಗೆ, ರೋಗಿಯ ಸಹಾಯಕರಿಗೆ ಉಚಿತ ಊಟ, ನೀರು ಮತ್ತು ಮಾಸ್ಕ್ ವಿತರಣೆ ಮಾಡಲಾಯಿತು.
ಇಂದು 10ನೇ ದಿನದ ಅಂಗವಾಗಿ ಆಹಾರ ನೀರು ಮಾಸ್ಕ್ ಹಾಗೂ ಬಾಳೆಹಣ್ಣನ್ನು ವಿತರಣೆ ಮಾಡಿದರು
13 ದಿನಗಳ ಕಾಲ ಲಾಕ್ಡೌನ್ ಮಾಡಿದ ಸಂದರ್ಭದಲ್ಲಿ ಪ್ರತಿದಿನ 400 ಜನರಿಗೆ ಊಟ, ನೀರು ಮಾಸ್ಕ್ ವಿತರಣೆ ಮಾಡಿದ್ದರು..
ಕೋವಿಡ್-19 ಎರಡನೇ ಅಲೆಯಿಂದ ಇಡೀ ರಾಜ್ಯವೇ ಲಾಕ್ ಡೌನ್ ಆಗಿದ್ದು ಆಸ್ಪತ್ರೆಯಲ್ಲಿ ತುಂಬಾ ಜನ ಹಸಿವಿನಿಂದ ಬಳಲುತ್ತಿದ್ದಾರೆ.
ಹೀಗಾಗಿ, ನ್ಯಾಚುರಲ್ ಸ್ಟಾರ್ ಆಕಾಶ್ ಅಭಿಮಾನಿ ಬಳಗದ
ನೇತೃತ್ವದಲ್ಲಿ ಬಡ ಜನರಿಗೆ, ರೋಗಿಯ ಸಹಾಯಕರಿಗೆ ಊಟ, ನೀರು ಹಾಗೂ ಮಾಸ್ಕ್ ವಿತರಣೆ ಮಾಡಗುತ್ತಿದ್ದು
ಹಾಸನದ ಪ್ರತಿಯೊಂದು ನಗರಗಳಲ್ಲಿ ನಿರ್ಗತಿಕರಿಗೆ .ನಿರಾಶ್ರಿತರಿಗೆ ಹಾಗೂ ಹೋಂ ಐಸೋಲೇಶನ್ ನಲ್ಲಿ ಅವಶ್ಯಕತೆ ಇರುವ ಜನರಿಗೆ ಹಸಿದವರಿಗೆ ಮಧ್ಯಾಹ್ನದ ಊಟ, ನೀರು ಮಾಸ್ಕ್ ಅನ್ನು ಲಾಕ್ಡೌನ್ ಮುಗಿಯುವವರೆಗೆ. ನ್ಯಾಚುರಲ್ ಸ್ಟಾರ್ ಆಕಾಶ ಅಭಿಮಾನಿ ಬಳಗದ
ಸಹಕಾರದೊಂದಿಗೆ ವಿತರಿಸಲಾಗುತ್ತದೆ ಎಂದು ತಂಡದ ಅಧ್ಯಕ್ಷರಾದ ರೋಷನ್ ಜಮೀರ್ ತಿಳಿಸಿದರು…
ಈ ಸಂದರ್ಭದಲ್ಲಿ ಚಂದನ್ ಗೌಡ. ಶ್ರೀ ನಿಧಿ ಎಂಟರ್ ಪ್ರೈಸಸ್ ಮಾಲಿಕ, ದಶ೯ನ್ ,ಪುನಿತ್, ಮಂಜು, ,ಅಕ್ಷಯ್. ಉಪಸ್ಥಿತರಿದ್ದರು…