ಅರಕಲಗೂಡು: ಇಂದು ಅರಕಲಗೂಡು ತಾಲ್ಲೂಕು ಸಾರ್ವಜನಿಕ ಆಸ್ಪತ್ರೆ, ರಾಮನಾಥಪುರ ಸಮುದಾಯ ಆರೋಗ್ಯ ಕೇಂದ್ರ ಹಾಗೂ ಕೊಣನೂರು ಕೋವಿಡ್ ಆಸ್ಪತ್ರೆಗಳಿಗೆ ಹಾಸನ ಲೋಕಸಭಾ ಸದಸ್ಯ ಪ್ರಜ್ವಲ್ ರೇವಣ್ಣ ಬೇಟಿ ಪರಿಶೀಲನೆ ನಡೆಸಿದರು
![](https://hassananews.com/wp-content/uploads/2021/05/fb_img_16204026493552731019032444315860-1024x576.jpg)
ಆಕ್ಸಿಜನ್ ಪೂರೈಕೆಯಲ್ಲಿ ವ್ಯತ್ಯಯ, RTPCR ರಿಪೋರ್ಟ್ ತಡವಾಗಿ ಬರುತ್ತಿದ್ದು, ರೆಮಿಡಿಸಿವರ್ ಇಂಜೆಕ್ಷನ್ ಪೂರೈಕೆ, ಹೆಚ್ಚುವರಿ ಮೆಡಿಕಲ್ ಸ್ಟಾಫ್ ಗಳ ಅಗತ್ಯತೆ, ಬೆಡ್ ಗಳ ಸಂಖ್ಯೆ ಹೆಚ್ಚಿಸುವ ಬಗ್ಗೆ ವೈದ್ಯಾಧಿಕಾರಿಗಳು ಗಮನಕ್ಕೆ ತಂದ ಹಿನ್ನೆಲೆಯಲ್ಲಿ ಸೂಕ್ತ ಕ್ರಮ ಕೈಗೊಳ್ಳುವ ಭರವಸೆ ನೀಡಿದರು
![](https://hassananews.com/wp-content/uploads/2021/05/fb_img_16204026545484471712857288632904-1024x576.jpg)
ಈ ಸಂದರ್ಭದಲ್ಲಿ ಅರಕಲಗೂಡು ಕ್ಷೇತ್ರದ ಶಾಸಕರಾದ ಎ ಟಿ ರಾಮಸ್ವಾಮಿ, ತಹಶಿಲ್ದಾರ್ ರೇಣುಕುಮಾರ್, ತಾಲ್ಲೂಕು ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರವಿ ಕುಮಾರ್ ರವರು, ತಾಲ್ಲೂಕು ಆರೋಗ್ಯಾಧಿಕಾರಿ ಸ್ವಾಮಿಗೌಡ ಹಾಗೂ ಅಧಿಕಾರಿಗಳು ಉಪಸ್ಥಿತರಿದ್ದರು.
![](https://hassananews.com/wp-content/uploads/2021/05/fb_img_16204026564982943928961509065796-1024x576.jpg)
![](https://hassananews.com/wp-content/uploads/2021/05/fb_img_16204026588671774367377413169766.jpg)