ಸಾರ್ವಜನಿಕ ಪ್ರಕಟಣೆ
ಈ ಮೂಲಕ ಹಾಸನ ನಗರಸಭಾ ವ್ಯಾಪ್ತಿಯ ಸಾರ್ವಜನಿಕರಿಗೆ ತಿಳಿಯಪಡಿಸುವುದೆನೆಂದರೆ ಸರ್ಕಾರದ ಆದೇಶದಂತೆ ಡೌನ್’ ನಿಮಿತ್ತ ಕೋವಿಡ್-19 ನಿಯಂತ್ರಣ ಸಲುವಾಗಿ ಸಾರ್ವಜನಿಕರಿಗೆ ಹೂವು,ಹಣ್ಣು,ತರಕಾರಿ ಕೊಳ್ಳಲು 7 ಸ್ಥಳಗಳಲ್ಲಿ ಮಾರುಕಟ್ಟೆಯನ್ನು ತೆರೆಯಲಾಗಿರುತ್ತದೆ.
1.ಹೊಸ ಬಸ್ ನಿಲ್ದಾಣ.
2.ಹಳೇ ಬಸ್ ನಿಲ್ದಾಣ.
3.ಡೈರಿ ಸರ್ಕಲ್ (ಪಾಲಿಟೆಕ್ನಿಕ್ ಕಾಲೇಜು ಆವರಣ)
4.ಸ್ಟೇಡಿಯಂ (ಸಾಲಗಾಮೆ ರಸ್ತೆ)
5.ಸಂತೇಪೇಟೆ: ಸ್ಕೂಲ್ ಆವರಣ,
6. ತಮ್ಲಾಪುರ
7.ವಿಜಯನಗರ.
ಇಲ್ಲಿ ಮಾರುಕಟ್ಟೆ ವ್ಯವಸ್ಥೆ ಕಲ್ಪಿಸಲಾಗಿದ್ದು ಸಾರ್ವಜನಿಕರು ವಾರದ ಮೂರು ದಿನಗಳು ಅಂದರೆ ಸೋಮವಾರ, ಬುದವಾರ,ಶುಕ್ರವಾರ ಬೆಳಿಗ್ಗೆ 6.00 ಗಂಟೆಯಿಂದ ಬೆಳಿಗ್ಗೆ 10.00 ಗಂಟೆಯವರೆಗೆ ಮಾತ್ರ ಅವಕಾಶವಿದ್ದು ಇನ್ನುಳಿದ ದಿನದಂದು ಮುಂದಿನ ಆದೇಶವರೆಗೆ ಸಂಪೂರ್ಣ ಲಾಕ್ ಡೌನ್ ಆಗಿರುತ್ತದೆ. ಸಾರ್ವಜನಿಕರು ತಾವು ವಾಸಿಸುವ ಹತ್ತಿರದ ಮಾರುಕಟ್ಟೆಯಲ್ಲಿ ವ್ಯವಹರಿಸಲು ಕೋರಿದೆ. ಈ ಸಂದರ್ಭದಲ್ಲಿಸಾರ್ವಜನಿಕರು ಅನವಶ್ಯಕ ಓಡಾಡುವುದು ಕಂಡು ಬಂದಲ್ಲಿ ಕಾನೂನು ರೀತಿಯ ಕ್ರಮ ವಹಿಸಲಾಗುವುದು.