ಸಕಲೇಶಪುರ: ಸೋಮವಾರದ ಆರ್ಸಿಬಿ ಕೆಕೆಆರ್ ನಡುವಿನ ಐಪಿಎಲ್ ಕ್ವಾಲಿ ಫೈಯರ್-2 ಪಂದ್ಯದ ವೇಳೆ ಮೊಬೈಲ್ ಮೂಲಕ ಬೆಟ್ಟಿಂಗ್ ಆಡುತ್ತಿದ್ದ ಒಬ್ಬನನ್ನು ನಗರ ಪೊಲೀಸರು ಬಂಧಿಸಿದ್ದಾರೆ. ಪ್ರೇಮನಗರ ಬಡಾವಣೆಯ ಎಸ್.ಕೆ.ಪ್ರದೀಪ್ ಬಂಧಿತ ಆರೋಪಿ.
ಅ.11 ರಂದು ಸಂಜೆ 6 ಗಂಟೆ ಸಮಯದಲ್ಲಿ ಪ್ರೇಮನಗರ ಬಡಾವಣೆಯ ಸಾರ್ವಜನಿಕ ರಸ್ತೆಯಲ್ಲಿ ಪ್ರದೀಪ್, ಮೊಬೈಲ್ ಫೋನ್ ಮೂಲಕ ಬೆಟ್ಟಿಂಗ್ ಆಡುತ್ತಿದ್ದ. ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಪಿಎಸ್ಐ ಬಸವರಾಜ್ ಚಿಂಚೋಳಿ ಹಾಗೂ ಸಿಬ್ಬಂದಿ ದಾಳಿ ನಡೆಸಿ ಪ್ರದೀಪ್ನನ್ನು ವಶ ಪಡೆದಿದ್ದಾರೆ.